ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಬಿ.ಎನ್. ವಾಸರೆಗೆ ಭರ್ಜರಿ ಜಯ

ಅಂಕೋಲಾ: ಕನ್ನಡ ಸಾಹಿತ್ಯ ಪರಿಷತ್ತಿನಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ.ಎನ್. ವಾಸರೆ ಅವರು ಭಾರೀ ಮತಗಳಿಂದ ಜಯಗಳಿಸಿದ್ದಾರೆ .
ಜಿಲ್ಲೆಯಲ್ಲಿ ಚಲಾವಣೆಗೊಂಡ 2789 ಮತಗಳಲ್ಲಿ ಬಿ.ಎನ್. ವಾಸರೆ ಅವರು 2168 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಂತ ಹೆಚ್ಚಿನ ಅಂತರಗಳಿಂದ ಜಯಸಾಧಿಸಿದ್ದಾರೆ. ಇತರ ಸ್ಪರ್ಧಿಗಳಾದ ವೇಣುಗೋಪಾಲ್ ಮುದ್ಗಣಿ 346, ಕೃಷ್ಣಮೂರ್ತಿ ಹೆಬ್ಬಾರ್ 156, ಶಾರದಾ ಭಟ್ಟ 59, ಆರ್.ವಿ.ಗುಡೆಪ್ಪನವರ್ 53 ಮತಗಳನ್ನು ಪಡೆದುಕೊಂಡಿದ್ದು 7 ಮತಗಳು ತಿರಸ್ಕೃತಗೊಂಡಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಯಲ್ಲಾಪುರ ಹೊರತುಪಡಿಸಿ ಬೇರೆ ಎಲ್ಲಾ ಮತಗಟ್ಟೆಗಳಲ್ಲಿ ವಾಸರೆ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬೊಮ್ಮಯ್ಯ ವಾಸರೆ ಅವರು ಆಯ್ಕೆ ಆಗಿರುವುದಕ್ಕೆ ಅಂಕೋಲಾದಲ್ಲಿ ಸಾಹಿತಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಹಿರಿಯ ಸಾಹಿತಿ ವಿಷ್ಣು ನಾಯ್ಕ, ಗೋಪಾಲಕೃಷ್ಣ ನಾಯಕ, ಜಗದೀಶ ನಾಯಕ, ಮಹಾಂತೇಶ ರೇವಡಿ ಮೊದಲಾದವರು ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement