ಧಾರವಾಡ: ವಿವಿಧ ಪ್ರಶಸ್ತಿ ಪಡೆದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು

ಧಾರವಾಡ: ಧಾರವಾಡದ ಎಂ. ನಗರ ಸವದತ್ತಿ ರಸ್ತೆ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ೧೦ನೇ ತರಗತಿಯ ದಿಶಾ ಮೊಗೇರ, ಸಾಂಸ್ಕೃತಿಕ ಸಾಕಾರ ಸಮಿತಿ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ೯ನೇ ತರಗತಿಯ ಅಫ್ತಾಬ್ ಹುಸೇನ್‌ ಮುಮ್ಮಿಗಟ್ಟಿ “ಹಮ್ ಹೋಂಗೆ ಕಾಮಿಯಾಬ್” ಚಿತ್ರದಲ್ಲಿ ನಟನೆಗಾಗಿ ನವ ಕರ್ನಾಟಕ ಚಿತ್ರ ಮಂಡಳಿಯವರು ಅತ್ಯುತ್ತಮ ಬಾಲ ನಟನೆಂದು ಪ್ರಶಸ್ತಿ ನೀಡಿದ್ದಾರೆ. ೯ನೇ ತರಗತಿಯ ಪ್ರಜ್ವಲ ಹೂಗಾರ ಹೈದ್ರಾಬಾದ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಶಾಲೆಗೆ ಕೀರ್ತಿ ತಂದ ಈ ಮೂವರು ವಿದ್ಯಾರ್ಥಿಗಳಿಗೆ ಜೆ.ಎಸ್.ಎಸ್. ಸಂಸ್ಥೆಯ ಕಾರ್ಯದರ್ಶಿಗಳಾದ ನ.ವಜ್ರಕುಮಾರ ಹಾಗೂ ವಿತ್ತಾಧಿಕಾರಿಗಳಾದ ಅಜಿತ ಪ್ರಸಾದ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ತ್ರಿವೇಣಿ ಆರ್. ಹಾಗೂ ಶಿಕ್ಷಕ ಶಿಕ್ಷಕೇತರರು ಮತ್ತು ಜೆ.ಎಸ್.ಎಸ್. ಸಂಸ್ಥೆಯ ಸಮಸ್ತ ಆಡಳಿತ ಮಂಡಳಿಯವರು ಮಕ್ಕಳ ಸಾಧನೆಯನ್ನು ಪ್ರಶಂಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement