ಧಾರವಾಡ ಜೈನ ಮಿಲನದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

ಧಾರವಾಡ: ಧಾರವಾಡ ಜೈನ ಮಿಲನ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಓದುತ್ತಿರುವ ಜೈನ, ಬಡ ಪ್ರತಿಭಾವಂತ ಪ್ರಥಮ ವರ್ಷದ ಪಿ.ಯು.ಸಿ, ಪ್ಯಾರಾಮೆಡಿಕಲ್, ಐ.ಟಿ.ಐ, ಡಿಪ್ಲೋಮಾ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಸಂಪರ್ಕ ಸಂಖ್ಯೆ, ವಿಳಾಸ, ಇತ್ಯಾದಿ ವಿವರಗಳನ್ನು ನಮೂದಿಸಿದ ವಿನಂತಿ ಅರ್ಜಿಯೊಂದಿಗೆ, ಪ್ರವೇಶ ಶುಲ್ಕ ಪಾವತಿಸಿದ ರಶೀದಿ, ಜಾತಿ, ಆದಾಯ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ತರಗತಿಗಳ ಎಲ್ಲಾ ಅಂಕಪಟ್ಟಿಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ ೧೫-೧೨-೨೦೨೧ ರ ಒಳಗಾಗಿ ತಲುಪುವಂತೆ ಅರ್ಜಿಗಳನ್ನು ಅಂಚೆ ಮೂಲಕ “ಅಶೋಕ. ಅ. ಬಾಳಿಕಾಯಿ ಮನೆ.ಸಂ: ಟಿ-೧೮, ೩ನೇ ಅಡ್ಡರಸ್ತೆ, ಶಾಂಭವಿ ಕಾಲನಿ, ಗಾಂಧಿನಗರ, ಧಾರವಾಡ-೫೮೦೦೦೪.” ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮೊ : ೯೪೪೮೮೩೧೨೯೬ ಗೆ ಕರೆ ಮಾಡಿ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement