
ಸಿದ್ದಾಪುರ: ಹಿರಿಯ ಪತ್ರಕರ್ತ, ಬರಹಗಾರ, ವಕೀಲ ರವೀಂದ್ರ ಭಟ್ ಬಳಗುಳಿ (೫೮) ಅನಾರೋಗ್ಯದಿಂದ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಅವರು ತಾಯಿ, ಪತ್ನಿ, ಓರ್ವ ಪುತ್ರ,ಸಹೋದರ ಹಾಗೂ ಹಿರಿಯ ಪತ್ರಕರ್ತ ಶಶಿಧರ ಭಟ್ ಹಾಗೂ ಅಪಾರ ಬಂಧು-ಬಳಗ, ಆತ್ಮೀಯರನ್ನು ಅಗಲಿದ್ದಾರೆ.
ಆರಂಭದಲ್ಲಿ ಜನಮಾಧ್ಯಮ, ನಂತರ ಪ್ರಜಾವಾಣಿ ದಿನಪತ್ರಿಕೆಗಳಲ್ಲಿ ಸುದೀರ್ಘ ಕಾಲ ಸ್ಥಳೀಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಳಗುಳಿಯ ರವೀಂದ್ರ ಭಟ್ ಕವಿತೆ, ಸಣ್ಣ ಕಥೆ ಪ್ರಾಕಾರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದರು. ಹೆಸರಾಂತ ನಾಟಕಕಾರ, ಸಾಮಾಜಿಕ ಕಾರ್ಯಕರ್ತ ದಿ|ವಿ.ಜಿ.ಭಟ್ಟರ ಮಗನಾಗಿ ತಂದೆಯ ಬದ್ಧತೆ, ಆದರ್ಶಗಳನ್ನು ಮುಂದುವರಿಸಿಕೊಂಡು ಬಂದಿದ್ದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಮಘೇಗಾರಿನ ಶ್ರೀ ಮಹಾಗಣಪತಿ ದೇವಾಲಯದ ಮೊಕ್ತೇಸರನಾಗಿ ಕಾರ್ಯನಿರ್ವಹಿಸಿದ್ದ ಅವರು ವಕೀಲ ವೃತ್ತಿಯಲ್ಲೂ ಉತ್ತಮ ಹೆಸರನ್ನು ಗಳಿಸಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ