ನಾವು ವೇಗವಾಗಿ ಓಮಿಕ್ರಾನ್ ಸೋಂಕು ಪತ್ತೆ ಹಚ್ಚಿದ್ದೇವೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇಬ್ಬರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್‌ ಹಾಗೂ ಟ್ರೇಸ್ ಮಾಡುವಂತೆ ಸೂಚನೆ ನೀಡಲಾಗಿದ್ದು, ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಓಮಿಕ್ರಾನ್ ಯಾವ ರೀತಿ ಹರಡಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಈಗ ಬಂದಿರುವ ಸೋಂಕು ತೀವ್ರವಾಗಿಲ್ಲ. ಇಲ್ಲ ಎಂದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡೆಲ್ಟಾದಲ್ಲಿ ತೀವ್ರತೆ ಹೆಚ್ಚಿತ್ತು. ಉಸಿರಾಟದ ಸಮಸ್ಯೆ ಹೆಚ್ಚಾಗಿತ್ತು. ಆದರೆ ಓಮಿಕ್ರಾನ್‌ ಸೋಂಕು ಕಂಡುಬಂದ ಇಬ್ಬರಲ್ಲಿ ಸೋಂಕು ತೀವ್ರವಾಗಿಲ್ಲ. ಆದರೂ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಈಗ ಓಮಿಕ್ರಾನ್‌ ಸೋಂಕು ಕಂಡುಬಂದಿರುವುದು ಇಬ್ಬರಲ್ಲಿ ಒಬ್ಬರು ವೈದ್ಯರಾಗಿದ್ದಾರೆ. ಮತ್ತೊಬ್ಬರು 66 ವರ್ಷದ ವೃದ್ಧರಾಗಿದ್ದಾರೆ. ಇವರು ದಕ್ಷಿಣ ಆಫ್ರಿಕಾದವರು ಎನ್ನಲಾಗಿದೆ. 46 ವರ್ಷದ ವೈದ್ಯರು ಕಳೆದ ಕೆಲವು ದಿನಗಳಿಂದ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರೇ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್‌ ಬಂದ ಮೇಲೆ ಸ್ವಯಂ ಐಸೋಲೇಷನ್‌ನಲ್ಲಿದ್ದಾರೆ. ಅವರು ಎರಡೂ ಡೋಸ್‌ ತೆಗೆದುಕೊಂಡಿದ್ದರು. ಆದರೆ ತ್ವರಿತ ಗತಿಯಲ್ಲಿ ಟೆಸ್ಟಿಂಗ್‌ ಮಾಡಿಸಿದ್ದರಿಂದ ಶೀಘ್ರವಾಗಿ ಸೋಂಕು ಪತ್ತೆಯಾಯಾಯಿತು ಎಂದು ಸಚಿವರು ತಿಳಿಸಿದರು.
ಓಮಿಕ್ರಾನ್‌ ಸೋಂಕನ್ನು ಅತ್ಯಂತ ವೇಗವಾಗಿ ನಮ್ಮ ರಾಜ್ಯದಲ್ಲಿ ಪತ್ತೆ ಮಾಡಲಾಗಿದೆ. ನಾವು ಕಳುಹಿಸಿದ್ದ ಸ್ಯಾಂಪಲ್ಸ್ ಅಧಿಕೃತವಾಗಿ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಸೋಂಕಾಗಿದೆ. ಓಮೈಕ್ರಾನ್ ಎರಡು ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದೆ. ಒಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದರು. ನವೆಂಬರ್ 23ರಂದು ಟೆಸ್ಟ್ ಮಾಸಿದಾಗ ನೆಗೆಟಿವ್‌ ಬಂದಿತ್ತು. ‌ ಆದರೆ ನಂತರ ಪಾಸಿಟಿವ್‌ ಬಂದಿತ್ತು. ಅವರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 247 ಜನರಿಗೆ ಟೆಸ್ಟ್ ಮಾಡಿದಾಗ ಯಾರಿಗೂ ಪಾಸಿಟಿವ್ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಎರಡನೇ ಸ್ಯಾಂಪಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರು. ಅವರು ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರೇ ಐಸೋಲೇಟ್ ಆಗಿದ್ದಾರೆ. ಅನುಮಾನ ಬಂದು ಜಿನೋಮಿಕ್ ಸೀಕ್ವೆನ್ಸ್ ಕಳುಹಿಸಲಾಗಿತ್ತು, ವೈದ್ಯರಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ. ಪ್ರಾಥಮಿಕ ಹಾಗೂ ದ್ವಿತೀಯ ಟೆಸ್ಟ್ ಮಾಡಿದ್ದು. ಐವರಿಗೆ ಪಾಸಿಟಿವ್ ಬಂದಿದೆ. ಐವರನ್ನು ಸೇರಿ ಐಸೋಲೇಟ್ ಮಾಡಿದ್ದೇವೆ. ಸತತವಾಗಿ ಸಂಪರ್ಕದಲ್ಲಿದ್ದೇವೆ ಎಂದು ಡಾ. ಸುಧಾಕರ್‌ ತಿಳಿಸಿದರು.
ಕೇಂದ್ರ ಸಚಿವರ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಅನಗತ್ಯವಾಗಿ ಊಹಾಪೋಹ ಹರಡುವುದು ಬೇಡ ಎಂದರು.
ಪ್ರತಿ ದಿನ 1 ಲಕ್ಷ ಜನ ವಿದೇಶದಿಂದ ಭಾರತಕ್ಕೆ ಬರುತ್ತಿದ್ದು, ಇಡೀ ದೇಶದಲ್ಲಿ ಮೊದಲಬಾರಿಗೆ ವೇಗವಾಗಿ ಪತ್ತೆ ಹಚ್ಚಿದ್ದೇವೆ. ಬೆಳಗಾವಿ ಅಧಿವೇಶನ ಮಾಡುವುದೂ ಸೇರಿದಂತೆ, ಹಲವು ವಿಚಾರಗಳು ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಯಿಂದ ಬಂದ ಮೇಲೆ ಸಭೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement