ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ವಲಸೆ ಅಧಿಕಾರಿಗಳು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.
ಶೋಗಾಗಿ ದುಬೈಗೆ ತೆರಳಬೇಕಿದ್ದ ಜಾಕ್ವೆಲಿನ್ ಅವರನ್ನು 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ತೊರೆಯದಂತೆ ತಡೆಯಲಾಗಿದೆ. ಇಡಿ ಮೂಲಗಳ ಪ್ರಕಾರ, ಈಗ ನಟಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುತ್ತದೆ
ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸುಮಾರು 200 ಕೋಟಿ ರೂಪಾಯಿಗಳ ಸುಲಿಗೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಎಫ್ಐಆರ್ ದಾಖಲಿಸಿದೆ. ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದಾಗಿ ಹೇಳಿ ರಾನ್ಬಾಕ್ಸಿ ಮಾಜಿ ಪ್ರವರ್ತಕರ ಪತ್ನಿಯಿಂದ 200 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪವೂ ಅವರ ಮೇಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ಗೆ ಇಡಿ ಹಲವು ಬಾರಿ ಸಮನ್ಸ್ ಕೂಡ ನೀಡಿದೆ. ಆಕೆ ಕೊನೆಯದಾಗಿ ಅಕ್ಟೋಬರ್ 20 ರಂದು ಏಜೆನ್ಸಿಯ ಮುಂದೆ ಹಾಜರಾದರು. ವರದಿಗಳ ಪ್ರಕಾರ, ಪ್ರಮುಖ ಆರೋಪಿ ಸುಕೇಶ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪಾಲ್ ಅವರ ಜೊತೆ ಮುಖಾಮುಖಿ ವಿಚಾರಣೆ ಮಾಡಲು ಮತ್ತು ನಟಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲು ಸಂಸ್ಥೆ ಬಯಸಿದೆ.
ಈ ಹಿಂದೆ, ಜಾಕ್ವೆಲಿನ್ ಮತ್ತು ಕಾನ್ಮ್ಯಾನ್ ಸುಖೇಶ್ ಡೇಟಿಂಗ್ ವರದಿಗಳು ಕೂಡ ಹೊರಬಿದ್ದಿದ್ದವು. ವರದಿಯ ಪ್ರಕಾರ, ಕಾರಾಗೃಹದ ಒಳಗಿನಿಂದ ಜಾಕ್ವೆಲಿನ್ಗೆ ಕರೆ ಮಾಡಿ, ದುಬಾರಿ ಉಡುಗೊರೆಗಳನ್ನು ಕಳುಹಿಸುತ್ತಿದ್ದರು. ಇದಲ್ಲದೆ, ಸುಕೇಶ್ ಜಾಕ್ವೆಲಿನ್ನಿಂದ ತನ್ನ ನೈಜ ಗುರುತನ್ನು ಮರೆಮಾಡಿದ್ದಾನೆ ಮತ್ತು ಅವಳೊಂದಿಗೆ ಮಾತನಾಡುವಾಗ ದೊಡ್ಡ ವ್ಯಕ್ತಿತ್ವವನ್ನು ಅನುಕರಿಸುತ್ತಿದ್ದನು ಎಂದು ವರದಿಯಾಗಿದೆ. ಆದರೆ, ಬಾಲಿವುಡ್ ನಟಿ ಡೇಟಿಂಗ್ ವರದಿಗಳನ್ನು ನಿರಾಕರಿಸಿದ್ದಾರೆ.
.
ನಿಮ್ಮ ಕಾಮೆಂಟ್ ಬರೆಯಿರಿ