ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ

ಮೈಸೂರು: ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ದಾಂಧಲೆ ನಡೆಸಿದ ಘಟನೆ‌ ವೀರನಹೊಸಳ್ಳಿಯ ಬಳಿಯ ನಾಗಪುರ ಹಾಡಿಯಲ್ಲಿ ಭಾನುವಾರ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವೀರನಹೊಸಳ್ಳಿ ಬಳಿಯ ನಾಗಪುರಕ್ಕೆ ಹಾಡುಹಗಲೇ ಒಂಟಿ ಸಲಗ ನುಗ್ಗಿ ದಾಂಧಲೆ‌ ನಡೆಸಿದ್ದು, ರಾಗಿ, ಜೋಳ, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಹಾನಿ ಮಾಡಿದೆ.
ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವನ್ನು ಬೆಂಕಿ ಹಿಡಿದು, ಬೆದರಿಸಲು ಯುವಕರು ಮುಂದಾದಾಗ ಅವರ ಮೇಲೆ ದಾಳಿಗೆ ಮುಂದಾದ ಒಂಟಿ ಸಲಗ ರೋಷದಿಂದ ತಂತಿಬೇಲಿಯನ್ನೇ ತನ್ನ ಕಿತ್ತು ಹಾಕಿದೆ. ನಂತರ ಗುರುಪುರದ ಮುಖ್ಯರಸ್ತೆಗೆ ಬಂದು ಜನರನ್ನು ಓಡಿಸಿಕೊಂಡು ಹೋಗಿದೆ.‌ ವಿದ್ಯುತ್ ಕಂಬವನ್ನು ಕೆಡವಿದೆ.
ಕಳೆದ ಕೆಲವು ದಿನಗಳಿಂದ ರಾತ್ರಿ ಮತ್ತು ಹಗಲು ಎನ್ನದೇ ವೀರನಹೊಸಳ್ಳಿ ಅರಣ್ಯವಲಯದಿಂದ ಬರುವ ಈ ಒಂಟಿ ಸಲಗ ಹಸುಗಳನ್ನು ಕೊಂದು ಹಾಕಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕೂಡಲೇ ಒಂಟಿ ಸಲಗವನ್ನು ಸೆರೆಹಿಡಿಯಬೇಕೆಂದು ಜನರು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement