ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಬಂದ್: ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ

ಉಡುಪಿ,: ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಅನ್ನು ನಿರ್ಬಂಧಿಸಿದ್ದು, ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾತ್ರಿ 10 ಗಂಟೆಗೆ ಬಂದ್ ಮಾಡಲು ಆದೇಶಿಸಲಾಗಿದೆ ಹಾಗೂ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೇಳಿದೆ. ಆದರೆ ಪೂರ್ಣ ಪ್ರಮಾಣದ ಮಾರಾಟಕ್ಕೆ ಅವಕಾಶ ನೀಡಬೇಕು ಹಾಗೂ ಮಾರಾಟದ ಅವಧಿಯನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎರಡು ವರ್ಷದಿಂದ ಸರಿಯಾಗಿ ವ್ಯಾಪಾರವಿಲ್ಲ. ನಾವು ಪಟ್ಟ ಬವಣೆಯನ್ನು ಸರ್ಕಾರಕ್ಕೆ ಮನವಿಯಲ್ಲಿ ತಿಳಿಸಿದ್ದೇವೆ. ಮೌಖಿಕವಾಗಿಯೂ ಸಂಕಷ್ಟ ಹೇಳಿಕೊಂಡಿದ್ದೇವೆ. ಐದು ಸಾವಿರಕ್ಕೂ ಮಿಕ್ಕಿ ಬಾರ್ ಅಂಡ್ ರೆಸ್ಟೋರೆಂಟ್ ಗಳಿದ್ದು ನಾವು ಲಾಕ್ಡೌನ್ ವೇಳೆ ನಾವು ತುಂಬಾ ನಷ್ಟ ಅನುಭವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ರಸ್ತೆಯಲ್ಲಿ ನಡೆಯುವ ಆಚರಣೆಗಳನ್ನು ನಿರ್ಬಂಧಿಸಿ. ಅದಕ್ಕೆ ನಮ್ಮ ಅಡ್ಡಿಯಿಲ್ಲ. ವ್ಯಾಪಾರ ಮಾಡಲು ಅವಕಾಶ ಕೊಟ್ಟರೆ ಲೈಸೆನ್ಸುದಾರರು ಚೇತರಿಸಿಕೊಳ್ಳುತ್ತೇವೆ. ನಮಗೆ ವ್ಯಾಪಾರ ನಡೆಯುವುದೇ ಈ ಎರಡು ದಿನಗಳಲ್ಲಿ. ಮುಖ್ಯಮಂತ್ರಿಗಳು ಹಾಗೂ ಅಬಕಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ನಮ್ಮ ಕಷ್ಟ ಗಮನಿಸಿ ದಯವಿಟ್ಟು ಆದೇಶದಲ್ಲಿ ಮಾರ್ಪಾಟುಗಳನ್ನು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ತೆರಿಗೆ ಪಾವತಿಸಲು ಎರಡು ಕಂತುಗಳನ್ನು ಅವಕಾಶ ಕೊಟ್ಟದ್ದು ಬಿಟ್ಟರೆ ಬೇರೆ ಏನು ಸಹಾಯ ವಾಗಿಲ್ಲ. ಕಟ್ಟಡ ತೆರಿಗೆ ಪಂಚಾಯತ್ ಲೈಸೆನ್ಸ್ ಇಲ್ಲೆಲ್ಲೂ ವಿನಾಯತಿಗಳನ್ನು ಸರ್ಕಾರ ಕೊಟ್ಟಿಲ್ಲ ಎಂದರು.ಕೇವಲ ಸರ್ಕಾರದ ಆದಾಯವನ್ನು ಲೆಕ್ಕ ಹಾಕುತ್ತಾರೆ. ನಮಗೆ ಆಗಿರುವ ನಷ್ಟವನ್ನು ಯಾರೂ ಲೆಕ್ಕ ಹಾಕಿಲ್ಲ ನಷ್ಟ ಸರಿದೂಗಿಸಿಕೊಳ್ಳಲು ಅವಕಾಶ ಕೊಡಬೇಕು. ಯಾಕೆಂದರೆ ಡಿ.31ಮತ್ತು ಜ. 1ರಂದು ಪೂರ್ಣಾವಧಿ ಮಾರಾಟಕ್ಕೆ ಅವಕಾಶ ಕೊಡಬೇಕು ಈ ಆದೇಶದಿಂದ ನಮಗೆ ಅನ್ಯಾಯವಾಗಿದೆ” ಎಂದಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement