ಬೆಂಗಳೂರು: ರಾಜ್ಯ ಬಂದ್ಗೆ ಸಂಪೂರ್ಣ ಬೆಂಬಲ ಇದೆ. ನಾಡಿನ ವಿಚಾರ ಬಂದಾಗ ನಾವು ರಾಜ್ಯದ ಪರವಾಗಿ ನಿಲ್ಲುತ್ತೇವೆ. ರಾಜ್ಯದೊಳಗೆ ಬೇರೆ ರಾಜ್ಯಗಳ ಪ್ರಕ್ರಿಯೆ ನಡೆಯಬಾರದು. ಎಂಇಎಸ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾದ ಸಿದ್ಧತೆ ಮಾಡಿಕೊಂಡು ಬಂದ್ಗೆ ಕರೆ ಕೊಡಬೇಕಿತ್ತು. ಸಿನಿಮಾಗಳಿಗೆ ನಷ್ಟವಾಗುತ್ತದೆ, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಾರೆ ಎಂದು ಸಬೂಬು ನೀಡುವುದು ಸರಿಯಾದ ಉತ್ತರ ಅಲ್ಲ. ಕರ್ನಾಟಕ ಬಂದ್ಗೆ ರೈತ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ. ಮಹಾಜನ್ ವರದಿಯನ್ನ ಎಲ್ಲರೂ ಫಾಲೊ ಮಾಡಬೇಕು. ನಮಗೆ ಬದ್ಧರಾಗಿ ನಾವು ಮುಂದುವರೆಯಬೇಕು ಎಂದು ಅವರು ಹೇಳಿದರು.
ಮೇಕೆದಾಟು ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೂಡಲೇ ಅಡಿಗಲ್ಲು ಹಾಕಬೇಕು. ಕೇಂದ್ರದ ಸಹಾಯ ಪಡೆದು ಯೋಜನೆ ಶುರು ಮಾಡಬೇಕು. ಸರ್ಕಾರ ಮಾಡದಿದ್ದರೆ ರೈತರೇ ಅಡಿಗಲ್ಲು ಹಾಕಬೇಕಾಗುತ್ತದೆ. ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡಿ ನಿಮಗೆ ಯೋಗ್ಯತೆ ಇಲ್ಲ ಎಂದು ತೋರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ