ಕೌಟುಂಬಿಕ ಕಲಹ : ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಜಲ್ನಾ (ಮಹಾರಾಷ್ಟ್ರ): ಕೌಟುಂಬಿಕ ಕಲಹದಿಂದಾಗಿ ಮಹಿಳೆಯೊಬ್ಬರು ತನ್ನ ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.
ಈ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಜಲ್ನಾದಲ್ಲಿ ನಡೆದಿದೆ. ಜಲ್ನಾದ ಅಂಬಾಡ್​ ತಾಲೂಕಿನ ಘಂಗರ್ಡೆ ಹಡಗಾಂವ್​​ಎಂಬಲ್ಲಿ ಈ ಘಟನೆ ನಡೆದಿದ್ದು, ಪತಿಯ ಕುಡಿತದ ಚಟದಿಂದ ಬೇಸತ್ತ ಮಹಿಳೆ ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾಳೆ. ಮೃತರನ್ನು ಗಂಗಾ ಸಾಗರ ಅದಾನಿ(32),ಭಕ್ತಿ (13), ಈಶ್ವರಿ (11), ಅಕ್ಷರ (9) ಮತ್ತು ಯುವರಾಜ್ ​(7) ಎಂದು ಗುರುತಿಸಲಾಗಿದೆ. ಜ್ಞಾನೇಶ್ವರ ಪ್ರಲ್ಹಾದ್ ಅದಾನಿ ತನ್ನ ಪತ್ನಿ ಗಂಗಾಸಾಗರ ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನೊಂದಿಗೆ ಹಡಗಾಂವ್​​ನಲ್ಲಿ ವಾಸವಾಗಿದ್ದರು. ಕುಡಿದ ಮತ್ತಿನಲ್ಲಿ ಗಂಡ ತನ್ನ ಹೆಂಡತಿ ಜೊತೆ ಯಾವಾಗಲೂ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದರಿಂದ ಬೇಸತ್ತು ಗುರುವಾರ ಮಧ್ಯಾಹ್ನ ಗಂಗಾ ತನ್ನ ನಾಲ್ವರು ಮಕ್ಕಳೊಂದಿಗೆ ಹೊರಗಡೆ ಹೋಗಿದ್ದಾರೆ. ರಾತ್ರಿಯಾದರೂ ವಾಪಸ್​ ಬಂದಿಲ್ಲ. ಹೀಗಾಗಿ, ಜ್ಞಾನೇಶ್ವರ ಗ್ರಾಮಸ್ಥರೊಂದಿಗೆ ತಡರಾತ್ರಿಯ ವರೆಗೆ ಪತ್ನಿ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾನೆ. ಆದರೆ, ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಅದಾನಿ ಅವರ ಕುಟುಂಬದ ಪಕ್ಕದಲ್ಲಿನ ಬಾವಿಯಲ್ಲಿ ಐವರ ಶವಗಳು ತೇಲುತ್ತಿದ್ದವು.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹಗಳನ್ನ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿ ಜ್ಞಾನೇಶ್ವರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್​ ಇನ್ಸ್​​ಪೆಕ್ಟರ್​ ಶೀತಲಕುಮಾರ್​, ಕೌಟುಂಬಿಕ ಕಲಹದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದು ಬಂದಿದ್ದು, ಜ್ಞಾನೇಶ್ವರ ಮದ್ಯ ವ್ಯಸನಿಯಾಗಿದ್ದನು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement