ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಸಮುದ್ರಕ್ಕೆ ಈಜಲು ಹೋದ ಇಬ್ಬರು ಮಕ್ಕಳು ನೀರಿನ ತೆರೆಗೆ ಸಿಕ್ಕಿ ಮೃತ ಪಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಮೃತರನ್ನು ಒಂಬತ್ತನೇ ತರಗತಿ ವಿದ್ಯಾರ್ಥಿ ದೊಡ್ಡಗುಂದದ ಮನೋಜ ಬಾಬು ನಾಯ್ಕ(15) ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ತಾಳಮಕ್ಕಿಯ ದರ್ಶನ ಉದಯ ನಾಯ್ಕ (16) ಎಂದು ಗುರುತಿಸಲಾಗಿದೆ. ಏಳು ಜನ ಹುಡುಗರು ವಾಲಿಬಾಲ್ ಆಡಲು ಹೋಗಿದ್ದರು. ಆಟ ಮುಗಿದ ನಂತರ ಸಮುದ್ರಕ್ಕೆ ಕೈಕಾಲು ಮುಖ ತೊಳೆಯಲು ಹೋಗಿದ್ದರು. ಐವರು ಕೈಕಾಲು ತೊಳೆದುಕೊಂಡು ವಾಪಸ್ ಆಗಿದ್ದಾರೆ. ಇವರಿಬ್ಬರು ಈಜಲು ಸಮುದ್ರದಲ್ಲಿ ಇಳಿದಿದ್ದಾರೆ. ಈಜುವಾಗ ತೆರೆಗೆ ಸಿಲುಕಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಮೀನುಗಾರರು ರಕ್ಷಣೆಗೆ ಧಾವಿಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಉಲ್ಲಾಸ ನಾಯ್ಕ ಎಂಬವರು ದೂರು ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ