ಮುಂಬೈ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ವಿಜಯ್ ರಹಂಗ್ಡೇಲ್ ಅವರ ಪುತ್ರ ಸೇರಿದಂತೆ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿಗಳು ಸೋಮವಾರ ರಾತ್ರಿ ವಾರ್ಧಾದ ಸೆಲ್ಸೂರ ಬಳಿ ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಏಳು ಮಂದಿ ಸಾವಂಗಿ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿದ್ದು, ತಡರಾತ್ರಿ ವಾಹನ ಚಾಲನೆಗೆ ತೆರಳಿದ್ದರು. ಚಾಲಕನ ನಿಯಂತ್ರಣ ತಪ್ಪಿದ ವಾಹನವು ಸೇತುವೆಯಿಂದ ಸುಮಾರು 40 ಅಡಿಗಳಷ್ಟು ಕೆಳಗೆ ಬಿದ್ದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಎಲ್ಲ ಏಳು ಜನ ಸತ್ತಿದ್ದಾರೆ. ಬೇರೆ ಯಾವುದೇ ವಾಹನ ಅಪಘಾತಕ್ಕೀಡಾಗಿಲ್ಲ. ನಾವು ನಿಯಂತ್ರಣ ಕೊಠಡಿಯಿಂದ ಮಾಹಿತಿ ಪಡೆದ ನಂತರ ನಾವು ಸ್ಥಳಕ್ಕೆ ತಲುಪಿದ್ದೇವೆ ಎಂದು ಸಾವಂಗಿ ಪೊಲೀಸ್ ಠಾಣೆಯ ಸಹಾಯಕ ನಿರೀಕ್ಷಕ ಬಾಬಾಸಾಹೇಬ್ ಥೋರಟ್ ಹೇಳಿದರು.
“ಕ್ಸೈಲೋ ಕಾರು ದೇವ್ಲಿಯಿಂದ ವಾರ್ಧಾಕ್ಕೆ ಹೋಗುತ್ತಿತ್ತು ಮತ್ತು ಮೇಲ್ಸೇತುವೆಯಲ್ಲಿದ್ದಾಗ ಚಾಲಕನ ಚಕ್ರಗಳ ಮೇಲೆ ನಿಯಂತ್ರಣ ಕಳೆದುಕೊಂಡಿತುಎಂದು ಥೋರಟ್ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ