ಜೆಡಿಎಸ್‍ನಿಂದ 20 ಸದಸ್ಯರ ನೂತನ ಕೋರ್ ಕಮಿಟಿ ರಚನೆ

ಬೆಂಗಳೂರು: ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಟ್ಟಿಯನ್ನು ಇಂದು, ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ನೇಮಕ ಮಾಡಲಾಗಿದೆ.
ಪಕ್ಷದ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ನೂತನ ಕೋರ್ ಕಮಿಟಿ 20 ಸದಸ್ಯರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
ಬಂಡೆಪ್ಪ ಕಾಶೆಂಪುರ– ಅಧ್ಯಕ್ಷರು, ವೆಂಕಟರಾವ್ ನಾಡಗೌಡ-ಸದಸ್ಯರು, ಸಿ.ಎಸ್.ಪುಟ್ಟರಾಜು– ಸದಸ್ಯರು, ಪ್ರಜ್ವಲ ರೇವಣ್ಣ-ಸದಸ್ಯರು, ಕುಪೇಂದ್ರ ರೆಡ್ಡಿ-ಸದಸ್ಯರು, ಮೊಹಮ್ಮದ್ ಝಫ್ರುಲ್ಲಾಖಾನ್-ಸದಸ್ಯರು, ಎಂ.ಕೃಷ್ಣಾರೆಡ್ಡಿ-ಸದಸ್ಯರು, ರಾಜಾ ವೆಂಕಟಪ್ಪನಾಯಕ-ಸದಸ್ಯರು, ಬಿ.ಎಂ.ಫಾರೂಕ್-ಸದಸ್ಯರು, ಕೆ.ಎ.ತಿಪ್ಪೇಸ್ವಾಮಿ-ಸದಸ್ಯರು ಮತ್ತು ಸಂಚಾಲಕರು, ವೈಎಸ್.ವಿ ದತ್ತ –ಸದಸ್ಯರು, ಕೆ.ಎಂ.ತಿಮ್ಮರಾಯಪ್ಪ-ಸದಸ್ಯರು, ಟಿ.ಎ.ಶರವಣ-ಸದಸ್ಯರು, ಶಾರದಾ ಪೂರ್ಯನಾಯಕ್-ಸದಸ್ಯರು, ನಾಸೀರ್ ಭಗವಾನ್-ಸದಸ್ಯರು, ಹನುಮಂತಪ್ಪ ಬಸಪ್ಪ ಮಾವಿನಮರದ-ಸದಸ್ಯರು, ರೂತ್ ಮನೋರಮಾ-ಸದಸ್ಯರು, ಸುಧಾಕರ ಶೆಟ್ಟಿ-ಸದಸ್ಯರು, ವಿ.ನಾರಾಯಣಸ್ವಾಮಿ-ಸದಸ್ಯರು ಸಮೃದ್ಧಿ ಮಂಜುನಾಥ-ಸದಸ್ಯರಾಗಿದ್ದಾರೆ.
ಅಲ್ಲದೆ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ವಿಶೇಷ ಆಹ್ವಾನಿತರಾಗಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement