9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಹಿರಿಯ ಐಪಿಎಸ್​ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿಐಡಿ ಎಸ್​ಪಿಯಾಗಿದ್ದ ರವಿ ಡಿ‌ ಚನ್ನಣ್ಣನವರ್​ ಅವ​ರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಳಿಸಲಾಗಿದೆ‌.‌
ಇವರೊಂದಿಗೆ ಐಪಿಎಸ್ ಅಧಿಕಾರಿಗಳಾದ ಭೀಮಾಶಂಕರ್ ಗುಳೇದ ಅವರನ್ನು ಸಿಐಡಿಯಿಂದ ನಗರದ ಪೂರ್ವ ವಿಭಾಗದ ಡಿಸಿಪಿಯಾಗಿ, ಅಬ್ದುಲ್ ಅಹದ್ ಅವರನ್ನು ಎಸಿಬಿಯಿಂದ ಕೆಎಸ್ಆರ್ ಟಿಸಿ ವಿಚಕ್ಷಣ ದಳಕ್ಕೆ, ಟಿ ಪಿ ಶಿವಕುಮಾರ​ ಅವರನ್ನು ಕಾರಾಗೃಹ ಇಲಾಖೆ ಎಸ್ಪಿಯಿಂದ ಚಾಮರಾಜನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಚಾಮರಾಜನಗರ ನಗರ ಎಸ್ ಪಿ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರಿನ ಪೊಲೀಸ್ ತರಬೇತಿ ಶಾಲೆಗೆ ಕೊಪ್ಪಳ ಎಸ್ಪಿ‌ ಶ್ರೀಧರ್ ಅವರನ್ನು ಡಿಸಿಆರ್ ಬಿಗೆ ವರ್ಗಾಯಿಸಲಾಗಿದೆ. ಡೆಕ್ಕ ಕಿಶೋರ್ ಬಾಬುರನ್ನು ಬೀದರ್ ಎಸ್ಪಿಯಾಗಿ ಹಾಗೂ ಮೈಸೂರಿನ ಎಸಿಬಿ ಎಸ್ ಪಿ‌ ಅರುಣಂಗ್ಶು ಗಿರಿ ಅವರನ್ನು ಕೊಪ್ಪಳ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement