ಕೊಪ್ಪಳ: ಟ್ಯಾಕ್ಸಿ ಸಾಲದ ಕಿರುಕುಳಕ್ಕೆ ಮನನೊಂದು ಟ್ಯಾಕ್ಸಿ ಮಾಲೀಕ ರಸ್ತೆ ಮಧ್ಯದಲ್ಲಿಯೇ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ತಿಕೋಟಿಕರ್ ಪೆಟ್ರೋಲ್ ಬಂಕ್ ಬಳಿ ನಡೆದ ಬಗ್ಗೆ ವರದಿಯಾಗಿದೆ.
ಬಾಗಲಕೋಟೆಯ ಸುಭಾಷಚಂದ್ರ ಎಂಬಾತ ವಾಹನಕ್ಕೆ ಬೆಂಕಿ ಹಚ್ಚಿದ ವ್ಯಕ್ತಿ.
ಈತ ಬಾಗಲಕೋಟೆಯ ಖಾಸಗಿ ಫೈನಾನ್ಸ್ನಲ್ಲಿ ಟ್ಯಾಕ್ಸಿ ಮೇಲೆ ಸಾಲ ಪಡೆದಿದ್ದನಂತೆ. ಕಳೆದ ನಾಲ್ಕೈದು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲ. ಇದರಿಂದ ಫೈನಾನ್ಸ್ ಪ್ರತಿನಿಧಿಗಳು ಸಾಲವನ್ನ ಕಟ್ಟುವಂತೆ ಪದೇ ಪದೆ ಒತ್ತಾಯ ಮಾಡಿದ್ದಾರೆ. ಕೋವಿಡ್ ಕಾರಣ ಹೇಳುತ್ತ ಬಂದಿದ್ದ ಈತನು ಸಾಲ ಪಾವತಿಸಿರಲಿಲ್ಲ ಎನ್ನಲಾಗಿದೆ.
ಭಾನುವಾರ ಕೊಪ್ಪಳಕ್ಕೆ ತನ್ನ ಟ್ಯಾಕ್ಸಿ ತೆಗೆದುಕೊಂಡು ಬಂದಿರುವುದು ಫೈನಾನ್ಸ್ ಪ್ರತಿನಿಧಿಗಳಿಗೆ ಗೊತ್ತಾಗಿ ಕೊಪ್ಪಳದಲ್ಲಿ ಬಂದು ಆತನ ಟ್ಯಾಕ್ಸಿ ತಡೆದು ಸಾಲ ಕೇಳಿದ್ದಾರೆ. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆದಿದೆ. ಕೊನೆಗೆ ತೀವ್ರ ಮನನೊಂದ ಟ್ಯಾಕ್ಸಿ ಮಾಲೀಕ ನಗರದ ಎಲ್ಐಸಿ ಕಚೇರಿ ಬಳಿ ಹೆದ್ದಾರಿ ರಸ್ತೆ ಮಧ್ಯದಲ್ಲಿಯೇ ತನ್ನ ಟ್ಯಾಕ್ಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ಯಾಕ್ಸಿ ಮಾಲೀಕನನ್ನು ಠಾಣೆಗೆ ಕರೆದುಹೊಂದು ತೆರಳಿದ್ದಾರೆ. ಪ್ರಕರಣ ದಾಖಲಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ