ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 16,436 ಜನರಿಗೆ ಕೊರೊನಾ ಸೋಂಕು ದಾಖಲು, 60 ಜನರ ಸಾವು

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಹೊಸದಾಗಿ 16,436 ಜನರಿಗೆ ಸೋಂಕು ದೃಢಪಟ್ಟಿದೆ. ಹಾಗೂ ಸೋಂಕಿಗೆ 60 ಮಂದಿ ಮೃತಪಟ್ಟಿದ್ದಾರೆ.
ಇದೇವೇಳೆ ರಾಜ್ಯದಲ್ಲಿ 44,819 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ ರಾಜ್ಯದಲ್ಲಿ ಒಟ್ಟು 38,60,774 ಮಂದಿಗೆ ಕೊರೊನಾ ಬಂದಿದೆ. ಒಟ್ಟು 36,72,744 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.0.36% ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,48,800ರಷ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 11.31%ಕ್ಕೆ ಇಳಿಕೆ ಕಂಡಿದೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರಿನಲ್ಲಿ 2 ತಿಂಗಳ ಮಗು ಮತ್ತು ಮೈಸೂರಲ್ಲಿ 12 ವರ್ಷದ ಬಾಲಕಿ ಕೊರೊನಾಗೆ ಮೃತಪಟ್ಟಿದ್ದಾರೆ. ಬುಧವಾರ 20,505 ಕೊರೊನಾ ಸೋಂಕು ಹಾಗೂ 81 ಮರಣ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಒಟ್ಟು 6,640 ಹೊಸ ಸೋಂಕು ಪತ್ತೆಯಾಗಿದ್ದು, 14 ಮರಣ ಪ್ರಕರಣ ವರದಿಯಾಗಿದೆ.
ಜಿಲ್ಲಾವಾರು ಸೋಂಕಿನ ಮಾಹಿತಿ
ಬಾಗಲಕೋಟೆ 287, ಬಳ್ಳಾರಿ 348, ಬೆಳಗಾವಿ 1,508, ಬೆಂಗಳೂರು ಗ್ರಾಮಾಂತರ 344, ಬೆಂಗಳೂರು ನಗರ 6,640, ಬೀದರ್ 115, ಚಾಮರಾಜನಗರ 221, ಚಿಕ್ಕಬಳ್ಳಾಪುರ 154, ಚಿಕ್ಕಮಗಳೂರು 132, ಚಿತ್ರದುರ್ಗ 241, ದಕ್ಷಿಣ ಕನ್ನಡ 317, ದಾವಣಗೆರೆ 157, ಧಾರವಾಡ 535, ಗದಗ 109, ಹಾಸನ 470, ಹಾವೇರಿ 203, ಕಲಬುರಗಿ 243, ಕೊಡಗು 478, ಕೋಲಾರ 181, ಕೊಪ್ಪಳ 178, ಮಂಡ್ಯ 345, ಮೈಸೂರು 706, ರಾಯಚೂರು 137, ರಾಮನಗರ 65, ಶಿವಮೊಗ್ಗ 701, ತುಮಕೂರು 572, ಉಡುಪಿ 309, ಉತ್ತರ ಕನ್ನಡ 567, ವಿಜಯಪುರ 124 ಮತ್ತು ಯಾದಗಿರಿಯಲ್ಲಿ 49 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಬದಲಾವಣೆ ಕುರಿತು ಹೇಳಿಕೆ ; ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement