ದಾಂಡೇಲಿ: ಮೊಸಳೆ ಹೊತ್ತೊಯ್ದಿದ್ದ ಯುವಕ ಶವವಾಗಿ ಪತ್ತೆ

ಕಾರವಾರ: ಜಿಲ್ಲೆಯ ದಾಂಡೇಲಿಯಲ್ಲಿ ಮನೆಯ ಹತ್ತಿರದ ಕಾಳಿನದಿ ದಂಡೆ ಬಳಿ ಕೈಕಾಲು ತೊಳೆಯುತ್ತಿದ್ದಾಗ ಮೊಸಳೆ ಎಳೆದುಕೊಂಡು ಹೋಗಿದ್ದ ವ್ಯಕ್ತಿಯ ಶವಪತ್ತೆಯಾಗಿದೆ.
23 ವರ್ಷದ ಅರ್ಷದ್ ಖಾನ್ ಎಂಬಾತ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದು, ದಾಂಡೇಲಿಯ ಪಟೇಲ್ ನಗರದ ನಿವಾಸಿಯಾಗಿದ್ದ ಈತ ಸೋಮವಾರದಂದು ಮನೆಯ ಹತ್ತಿರದಲ್ಲಿರುವ ಕಾಳಿ ನದಿಯ ಸಮೀಪ ಕೈ ಕಾಲು ತೊಳೆಯಲು ಹೋಗಿದ್ದಾಗ ಫೆ. 7ರಂದು ಈ ದುರ್ಘಟನೆ ನಡೆದಿತ್ತು .ನಿನ್ನೆ ಸಂಜೆ ಮೊಸಳೆ ದಾಳಿಯಿಂದ ಮೃತಪಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ರಾಂಪ್ಪ್ ತಂಡದಲ್ಲಿದ್ದ ನುರಿತ ಮುಳುಗು ತಜ್ಞರು ಯುವಕನ ಮೃತ ಶರೀರವನ್ನು ಪತ್ತೆ ಹಚ್ಚಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಸಂಜೆ 4:30 ರ ಸುಮಾರಿಗೆ ದಾಂಡೇಲಿಯಲ್ಲಿ ಪೇಪರ್‌ ಕಂಪನಿಯ ಹಿಂಭಾಗದ ಕಾಳಿ ನದಿಯಲ್ಲಿ ಶವ ಸಿಕ್ಕಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement