ಗೋವಾ, ಉತ್ತರಾಖಂಡ್‍ನಲ್ಲಿ ನಾಳೆ ಚುನಾವಣೆ, ಉತ್ತರ ಪ್ರದೇಶದಲ್ಲಿ 2ನೇ ಹಂತದ ಮತದಾನ

ನವದೆಹಲಿ: ಉತ್ತರಪ್ರದೇಶದ ಎರಡನೇ ಹಂತದ 55 ಸ್ಥಾನಗಳ ಜೊತೆಗೆ ಉತ್ತರಾಖಂಡದ 70 ವಿಧಾನಸಭಾ ಸ್ಥಾನಗಳು ಮತ್ತು ಗೋವಾದ 40 ಕ್ಷೇತ್ರಗಳಿಗೆ ನಾಳೆ. ಸೋಮವಾರ ಮತದಾನ ನಡೆಯಲಿದೆ.
ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಾಗೂ ರಾಜಕೀಯ ಅಸ್ಥಿರತೆಗೆ ಹೆಸರುವಾಸಿಯಾದ ಎರಡು ರಾಜ್ಯಗಳಾದ ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ದಿನದ ಚುನಾವಣೆ ನಡೆಯುತ್ತಿದೆ ಹಾಗೂ ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ವಿಧಾನಸಭೆ ಚುನಾವಣೆ ನಡೆಯಲಿದೆ.

ಬಹಿರಂಗ ಪ್ರಚಾರ ಅವ ಮುಗಿವ ಮುನ್ನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ತರುವುದಾಗಿ ಭರವಸೆ ನೀಡಿ ವಿವಾದಿತ ವಿಷಯವನ್ನು ಮತ್ತೊಮ್ಮೆ ಚರ್ಚೆಗೆ ತಂದಿದ್ದಾರೆ. ಸಾಮಾನ್ಯ ನಾಗರಿಕ ಸಂಹಿತೆಯು ಮಹಿಳಾ ಸಬಲೀಕರಣವನ್ನು ಬಲಪಡಿಸುವ ಜೊತೆಗೆ ಸಾಮಾಜಿಕ ಸೌಹಾರ್ದತೆ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಚಾರದ ಕೊನೆಯ ದಿನದಂದು, ಮೋದಿ ರುದ್ರಪುರದಲ್ಲಿ, ಆದಿತ್ಯನಾಥ್ ತೆಹ್ರಿ ಮತ್ತು ಕೋಟ್ದ್ವಾರದಲ್ಲಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಪ್ರೋಟ್ ಉಪ್ಪು ಮತ್ತು ರಾಮನಗರದಲ್ಲಿ, ಷಾ ಅವರು ಧನೋಲ್ಟಿ, ಸಹಸ್ಪುರ್ ಮತ್ತು ರಾಯ್ಪುರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ಪ್ರಿಯಾಂಕಾ ಗಾಂಧಿ ಅವರು ಖತಿಮಾ ಮತ್ತು ಹಲ್ದ್ವಾನಿಯಲ್ಲಿ ನಡೆದ ರ್ಯಾಲಿಗಳಲ್ಲಿ ಮಾತನಾಡಿದರು.
ಪ್ರಚಾರ ಸಭೆಗಳಲ್ಲಿ ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನ್ನು ಅನುಮತಿಸದಿರುವ ವಿಷಯವು ಪ್ರಸ್ತಾಪಗೊಂಡಿದೆ.
ಗೋವಾ ರಾಜ್ಯದ 40 ಕ್ಷೇತ್ರಗಳಿಗೆ ಒಟ್ಟು 301 ಅಭ್ಯರ್ಥಿಗಳು ಕಣದಲ್ಲಿದ್ದು, 68 ಸ್ವತಂತ್ರ ಅಭ್ಯರ್ಥಿಗಳೂ ಇದ್ದಾರೆ. ಬಿಜೆಪಿಯ ದಿವಂಗತ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಪಣಜಿ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ನಂತರ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಮಾಂಡ್ರೆಮ್ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರಿಗೂ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.
ಉತ್ತರಾಖಂಡನ 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ), ಆಮ್ ಆದ್ಮಿ ಪಕ್ಷ (ಎಎಪಿ), ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ, ತ್ರಿಕೋನ ಚುನಾವಣಾ ಕದನಕ್ಕೆ ಉತ್ತರಾಖಂಡ ಸಾಕ್ಷಿಯಾಗಲಿದೆ.
ಉತ್ತರ ಪ್ರದೇಶ ವಿಧಾನಸಭೆಯ 55 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿ, ಎಸ್ಪಿ, ಬಿಎಸ್ಪಿ, ಸಿಒಎನ್ಜಿ, ಆರ್‍ಎಲ್‍ಡಿ- ಹಿರಿಯ ನಾಯಕರು ಕೊನೆಯ ಕ್ಷಣದವರೆಗೂ ಮತದಾರರನ್ನು ಓಲೈಸಲು ಪ್ರಯತ್ನಿಸಿದರು. ಒಂಬತ್ತು ಜಿಲ್ಲಾಗಳಾದ ಸಹರಾನ್ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲï, ರಾಂಪುರ, ಅಮ್ರೋಹಾ, ಬುಡೌನ್, ಬರೇಲಿ ಮತ್ತು ಷಹಜಹಾನ್ಪುರದಲ್ಲಿ 586 ಅಭ್ಯರ್ಥಿಗಳು ಈ ಹಂತದಲ್ಲಿ ಕಣದಲ್ಲಿದ್ದಾರೆ.
ಮತದಾನ ನಡೆಯುವ ಪ್ರದೇಶಗಳಲ್ಲಿ ಬರೇಲ್ವಿ ಮತ್ತು ದೇವಬಂದ್ ಪಂಥಗಳ ಧಾರ್ಮಿಕ ಮುಖಂಡರಿಂದ ಪ್ರಭಾವಿತವಾಗಿರುವ ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯಿದೆ. ಈ ಪ್ರದೇಶಗಳನ್ನು ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಅಲ್ಲಿ ಓವೈಸಿ ನೇತೃತ್ವದ ಎಂಐಎಂಐಎಂ ಪಕ್ಷವು ಹೆಚ್ಚು ಮುಸ್ಲಿಮ್‌ ಮತಗಳನ್ನು ಹೆಚ್ಚು ಸೆಳೆದರೆ ಸಮಾಜವಾದ ಪಕ್ಷಕ್ಕೆ ಹೆಚ್ಚು ಹಾನಿಯಾಗಲಿದೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement