ಅಣ್ಣ-ತಂಗಿ ನಡುವೆ ಅಕ್ರಮ ಸಂಬಂಧ ಪ್ರಶ್ನಿಸಿದ ತಾಯಿಯನ್ನೇ ಕೊಲೆ ಮಾಡಿದರು…!

ತುಮಕೂರು :ಸಂಬಂಧದಲ್ಲಿ ಅಣ್ಣನಾಗುವವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಮಗಳು ತನ್ನ ತಾಯಿಯನ್ನ ಕೊಂದ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಘಟನೆ ಕೊರಟಗೆರೆಯಲ್ಲಿ ನಡೆದಿದ್ದು, ಸಾವಿತ್ರಮ್ಮ(೪೫) ಕೊಲೆಯಾದವರು. ಇವರು ನೀರಿನ ಸಂಪಿನಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಪೊಲೀಸ್‌ ಪ್ರಕರಣವೂ ದಾಖಲಿಸಲಾಗಿತ್ತು. ಆದರೆ ಪೊಲೀಸರು ಮಗಳು ಶೈಲಜಾ ಅವರ ಬಗ್ಗೆ ಸಂಶಯ ಹೊಂದಿದ್ದರು. ಇದೇ ಅನುಮಾನದ ಮೇಲೆ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಶೈಲಜಾ ಸಂಬಂಧದಲ್ಲಿ ಅಣ್ಣನಾಗುವ ಪುನೀತ್‌ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳಾಗಿರುವ ಇವರ ಸಂಬಂಧ ಶೈಲಜಾ ತಾಯಿ ಸಾವಿತ್ರಮ್ಮನ ಅವರಿಗೆ ತಿಳಿದು ಅವರು ಮಗಳಿಗೆ ಬುದ್ಧಿ ಹೇಳಿ, ನಂತರ ಇಬ್ಬರಿಗೂ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಮಗಳು ತಪ್ಪು ತಿದ್ದಿಕೊಂಡಿದ್ದಾಳೆ ಎಂದು ಸಾವಿತ್ರಮ್ಮ ಭಾವಿಸಿದ್ದಳು. ಆದರೆ ಇವರಿಬ್ಬರು ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಸಾವಿತ್ರಮ್ಮ ಅವರನ್ನೇ ಕೊಲೆ ಮಾಡಲು ನಿರ್ಧರಿಸಿದ್ದರು. ಜನವರಿ ೨೯ರಂದು ಸಾವಿತ್ರಮ್ಮನ ಮನೆಗೆ ಬಂದಿದ್ದ. ಮೂವರು ಒಟ್ಟಿಗೆ ಊಟ ಮಾಡಿದ್ದರು. ಪುನೀತ್‌ ರಾತ್ರಿ ಅಲ್ಲಿಯೇ ಮಲಗಿದ್ದು, ಮಧ್ಯರಾತ್ರಿ ಶೈಲಜಾ ಜೊತೆ ಸೇರಿ ಸಾವಿತ್ರಮ್ಮನ ಕತ್ತು ಹಿಸುಕಿ ಕೊಲೆಗೈದು, ನೀರಿನ ಸಂಪಿಗೆ ಹಾಕಿದ್ದಾರೆ. ನಂತರ ಕಾಲು ಜಾರಿ ಸಂಪಿʼಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಈಗ ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಯಲಾಗಿದ್ದು, ತಾಯಿಯನ್ನ ಕೊಲೆ ಮಾಡಿರುವುದನ್ನು ಮಗಳು ಒಪ್ಪಿಕೊಂಡಿದ್ದಾಳೆ. ಕೊರಟಗೆರೆ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement