ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು 33 ವರ್ಷಗಳ ಹಿಂದಿನ ರಸ್ತೆ ರೋಷ (road rage) ಪ್ರಕರಣದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಂತೆ ಶುಕ್ರವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ತಮ್ಮ ವಿರುದ್ಧದ ರಸ್ತೆ ರೋಷ (road rage) ಪ್ರಕರಣದಲ್ಲಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ ಸಿಧು ಅವರು ತಮ್ಮ ” ಖ್ಯಾತಿ ಮತ್ತು ಶುದ್ಧ ಪೂರ್ವಾಪರಗಳನ್ನು” ಪರಿಗಣನೆಗೆ ಉಲ್ಲೇಖಿಸಿದ್ದಾರೆ ಮತ್ತು ಪ್ರಕರಣದಲ್ಲಿ ತಮ್ಮ ಶಿಕ್ಷೆಯನ್ನು ಬದಲಾಯಿಸದಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಕಳೆದ ಮೂರು ದಶಕಗಳಲ್ಲಿ ಕಳಂಕ ರಹಿತ ರಾಜಕೀಯ ಮತ್ತು ಕ್ರೀಡಾ ವೃತ್ತಿಜೀವನವನ್ನು ಹೊಂದಿರುವುದಾಗಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. 1988 ರ ರೋಡ್ ರೇಜ್ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸದಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ -ಈ ಪ್ರಕರಣದಲ್ಲಿ ಸಿಧು ಅವರನ್ನು 1,000 ರೂ.ಗಳ ಅತ್ಯಲ್ಪ ದಂಡದೊಂದಿಗೆ ಬಿಡುಗಡೆ ಮಾಡಲಾಗಿತ್ತು.
ಸೆಪ್ಟೆಂಬರ್ 2018 ರಲ್ಲಿ ನೀಡಲಾದ ನ್ಯಾಯಾಲಯದ ನೋಟಿಸ್ಗೆ ಪ್ರತಿಕ್ರಿಯೆಯಾಗಿ ತಮ್ಮ ಅಫಿಡವಿಟ್ ಸಲ್ಲಿಸಿದ ಸಿಧು, ಸಂಸದರಾಗಿ ತಮ್ಮ ಕ್ಷೇತ್ರದ ನಾಗರಿಕರ ಮಾತ್ರವಲ್ಲದೆ ಸಾರ್ವಜನಿಕರ ಕಲ್ಯಾಣಕ್ಕಾಗಿ ಕೆಲಸ ಮಾಡಿರುವುದಾಗಿ ಅದರಲ್ಲಿ ಹೇಳಿದ್ದಾರೆ.
ಅಲ್ಲದೆ, ಲೋಕೋಪಕಾರಿ ಕಾರ್ಯಗಳಲ್ಲಿ ತಕ್ಷಣದ ಹಣಕಾಸಿನ ನೆರವು ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಮತ್ತು ಪರಿಸರ ಯೋಜನೆಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಸಾಮಾಜಿಕ ಕಲ್ಯಾಣಕ್ಕೆ ಕೊಡುಗೆಗಳನ್ನು ನೀಡಿದ್ದೇನೆ. ಮೇಲೆ ಹೇಳಲಾದ ನಿರ್ವಿವಾದದ ಸಂಗತಿಗಳು ಉತ್ತರಿಸುವ ಪ್ರತಿವಾದಿಯು ಕಾನೂನು ಪಾಲಿಸುವ ನಾಗರಿಕನಾಗಿದ್ದಾನೆ ಎಂದು ಅಫಿಡವಿಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರ ಪೀಠವು ಶುಕ್ರವಾರ ಸಿಧು ಶಿಕ್ಷೆಯನ್ನು ಹೆಚ್ಚಿಸುವಂತೆ ಕೋರಿದ ಮರುಪರಿಶೀಲನಾ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದೆ. 2018 ರ ಸೆಪ್ಟೆಂಬರ್ನಲ್ಲಿ ಪೀಠವು ಸಿಧುಗೆ ನೋಟಿಸ್ ನೀಡಿದ್ದು, ಮೇ 2018 ರ ತೀರ್ಪಿನಲ್ಲಿ ಅವರಿಗೆ ನೀಡಲಾದ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸುವ ಸೀಮಿತ ಪ್ರಶ್ನೆಗೆ ಅದು ನೋಟಿಸ್ ನೀಡಿತು
ಭಾರತೀಯ ದಂಡ ಸಂಹಿತೆಯ (ಸ್ವಯಂಪ್ರೇರಿತ ಗಾಯ) ಸೆಕ್ಷನ್ 323 ರ ಅಡಿಯಲ್ಲಿ ಸಿಧು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು ಅದು ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ಅಥವಾ ₹1,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸುತ್ತದೆ.
32 ವರ್ಷಗಳಷ್ಟು ಹಳೆಯದಾದ ರೋಡ್ ರೇಜ್ ಪ್ರಕರಣದಲ್ಲಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ನೀಡಿರುವ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು, ಶುಕ್ರವಾರ ಪರಿಗಣಿಸಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ