ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಮತ್ತಷ್ಟು ಇಳಿಕೆ

ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 268 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 5,623 ಕ್ಕೆ ಇಳಿಕೆಯಾಗಿದೆ. ಇಂದು, ಸೋಮವಾರ 14 ಮಂದಿ ಮೃತಪಟ್ಟಿದ್ದಾರೆ ಅವಧಿಯಲ್ಲಿ 1,119 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಬಾಗಲಕೋಟೆ, ಗದಗ, ಹಾವೇರಿ, ಮಂಡ್ಯ, ರಾಯಚೂರು, ರಾಮನಾಗರ,ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಒಂದೂ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಹಲವು ದಿನಗಳ ಬಳಿಕ ಸೋಂಕು ಕಾಣಿಸಿಕೊಂಡಿದೆ. 161 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜಧಾನಿಯಲ್ಲಿ 550 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಂದು 10 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಸೋಂಕಿನ ಮಾಹಿತಿ…
ಬಾಗಲಕೋಟೆ- 0, ಬಳ್ಳಾರಿ –7, ಬೆಳಗಾವಿ – 2, ಬೆಂಗಳೂರು ಗ್ರಾಮಾಂತರ- 1, ಬೆಂಗಳೂರು ನಗರ – 161, ಬೀದರ್ 2, ಚಾಮರಾಜನಗರ- 2, ಚಿಕ್ಕಬಳ್ಳಾಪುರ- 2,
ಚಿಕ್ಕಮಗಳೂರು- 3, ಚಿತ್ರದುರ್ಗ- 6, ದಕ್ಷಿಣ ಕನ್ನಡ – 13, ದಾವಣಗೆರೆ- 1, ಧಾರವಾಡ- 3, ಗದಗ- 0, ಹಾಸನ- 3, ಹಾವೇರಿ- 0, ಕಲಬುರಗಿ- 1, ಕೊಡಗು- 1, ಕೋಲಾರ- 5, ಕೊಪ್ಪಳ- 7, ಮಂಡ್ಯ- 0, ಮೈಸೂರು- 11, ರಾಯಚೂರು- 0, ರಾಮನಗರ – 0, ಶಿವಮೊಗ್ಗ- 10, ತುಮಕೂರು- 15, ಉಡುಪಿ- 3, ಉತ್ತರ ಕನ್ನಡ- 3 ವಿಜಯಪುರ – 1, ಯಾದಗಿರಿ- 0 ಪ್ರಕರಣಗಳು ದಾಖಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement