7 ತಿಂಗಳಲ್ಲಿ 3 ಬಾರಿ ಕಚ್ಚಿದ ನಾಗರಹಾವು…ಮೂರನೇ ಸಲ ಪ್ರಾಣವನ್ನೇ ತೆಗೆಯಿತು..!

ಆದಿಲಾಬಾದ್ (ತೆಲಂಗಾಣ)​: ತೀರ ಅಪರೂಪದ ಘಟನೆಯೊಂದರಲ್ಲಿ ಯುವತಿಗೆ ಬೇರೆ ಬೇರೆ ಸಮಯದಲ್ಲಿ ಅಂದರೆ ಏಳು ತಿಂಗಳಲ್ಲಿ ನಾಗರ ಹಾವು ಮೂರು ಸಲ ಕಚ್ಚಿದೆ, ಎರಡು ಸಲ ಬದುಕಿದೆ ಹುಡುಗಿ ಮೂರನೇ ಸಲ ಕಚ್ಚಿದಾಗ ಪ್ರಾಣ ಕಳೆದುಕೊಂಡಿದ್ದಾಳೆ ಎಂದಿ ಈಟವಿ ಭಾರತ್‌ ವರದಿ ಮಾಡಿದೆ.
ವರದಿ ಪ್ರಕಾರ, ಈ ಘಟನೆ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಆದಿಲಾಬಾದ್‌ ಜಿಲ್ಲೆಯ ಬೆದೋಡ ಗ್ರಾಮದ ರೈತ ಸುಭಾಷ್​ ಅವರು ಮಗಳು ಪ್ರಣಾಳಿ (18) ಎಂಬವಳೇ ಮೃತಪಟ್ಟವಳು ಎಂದು ಹೇಳಲಾಗಿದೆ.
ರೈತ ಸುಭಾಷಗೆ ಏಕೈಕ ಮಗಳಿದ್ದಳು. ಆದಿಲಾಬಾದ್​ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಕದವಿ ಓದುತ್ತಿದ್ದಳು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮನೆಯಲ್ಲಿ ಪ್ರಣಾಳಿ ಮಲಗಿದ್ದಾಗ ಕೈಗೆ ಹಾವು ಕಡಿದಿತ್ತು. ಪೋಷಕರು ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಅಪಾಯದಿಂದ ಪಾರಾಗಿ ಬಂದಿದ್ದಳು. ನಂತರ ಈವರ್ಷ ಜನವರಿಯಲ್ಲಿ ಅವಳು ಮನೆಯಂಗಳದಲ್ಲಿ ಕುಳಿತುಕೊಂಡಿದ್ದಾಗ ಮತ್ತೆ ಹಾವು ಕಚ್ಚಿತ್ತು. ಆಗಲೂ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳನ್ನು ಬದುಕಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದರು.
ಆದರೆ ವಿಧಿ ಮೃಣಾಳಿಯನ್ನು ಬಿಟ್ಟಿಲ್ಲ. ಕಳೆದ ಶುಕ್ರವಾರ ಹೋಳಿ ಹಬ್ಬದ ಪ್ರಯುಕ್ತ ತನ್ನ ಸ್ನೇಹಿತರಿಗೆ ಬಣ್ಣ ಹಚ್ಚಲೆಂದು ಪ್ರಣಾಳಿ ತನ್ನ ಕಾಲೇಜ್​ ಬ್ಯಾಗ್​ನಲ್ಲಿದ್ದ ಬಣ್ಣದ ಪ್ಯಾಕೇಟ್​ ತೆಗೆಯುವ ವೇಳೆ ಅದರಲ್ಲಿದ್ದ ಹಾವು ಕಚ್ಚಿದೆ ಎಂದು ಹೇಳಲಾಗಿದೆ.
ಹಾವು ಕಚ್ಚಿದ ಕೂಡಲೇ ಪೋಷಕರು ಮಗಳನ್ನು ರಿಮ್ಸ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮಧ್ಯರಾತ್ರಿ ಪ್ರಣಾಳಿ ಬಾರದಲೋಕಕ್ಕೆ ಹೋಗಿದ್ದಾಳೆ. ಏಕೈಕ ಮಗಳನ್ನು ಕಳೆದುಕೊಂಡ ಕುಟುಂಬದ ರೋದನ ಮುಗಿಲು ಮುಟ್ಟಿದೆ. ಕಳೆದ ಏಳು ತಿಂಗಳಲ್ಲಿ ಹಾವು ಬೆನ್ನು ಬಿಡದೇ ಆಕೆಯನ್ನು ಮೂರನೇ ಬಾರಿಗೆ ಕಚ್ಚಿದೆ. ಮೂರನೇ ಸಲ ಪ್ರಾಣವನ್ನೂ ತೆಗೆದಿದೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement