ಹುದ್ದೆ ಕೈತಪ್ಪಿದ ಕೋಪಕ್ಕೆ ಪ್ರಾಂಶುಪಾಲರ ಮೇಲೆ ಆಸಿಡ್ ಎರಚಿದ ಸಹ ಪ್ರಾಧ್ಯಾಪಕ

ಕಲಬುರಗಿ: ಕಾಲೇಜು ಪರಿವೀಕ್ಷಣಾ ಇನ್ಸ್ಪೆಪೆಕ್ಟರ್ ಹುದ್ದೆ ಸಿಗಲಿಲ್ಲವೆಂಬ ಕೋಪದಿಂದ ಕಾಲೇಜು ಪ್ರಾಂಶುಪಾಲರ ಮೇಲೆ ಸಹ ಪ್ರಾಧ್ಯಾಪಕರೊಬ್ಬರು ಆಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಇಲ್ಲಿನ ಎಚ್ ಕೆಇ ಸೊಸೈಟಿಯ ಫಾರ್ಮಸಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಶಾಂತವೀರ ಎಂಬವವರು ಕಾಲೇಜು ಪರಿವೀಕ್ಷಣಾ ಇನ್ಸ್ ಪೆಕ್ಟರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದ. ಆದರೆ, ಕೊನೆ ಗಳಿಗೆಯಲ್ಲಿ ಆತನಿಗೆ ಈ ಹುದ್ದೆ ದೊರಕಿರಲಿಲ್ಲ. ತನಗೆ ಈ ಹುದ್ದೆ ಸಿಗದಿರಲು ಪ್ರಾಂಶುಪಾಲ ಅರುಣಕುಮಾರ್ ಅವರ ಕೈವಾಡವೇ ಕಾರಣ ಎಂಬ ಸಂದೇಹದಿಂದ ಶಾಂತವೀರ, ಪ್ರಾಂಶುಪಾಲರ ಮೇಲೆ ಆಸಿಡ್ ಎರಚಿ ಹಲ್ಲೆಗೆ ಮುಂದಾಗಿದ್ದಾನೆ.
ಮಾರ್ಚ್ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ  ಪ್ರಕರಣ ದಾಖಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement