ಕರ್ಮ ಹಿಟ್ಸ್ ಬ್ಯಾಕ್…ರಸ್ತೆಯಲ್ಲಿ ಎಮ್ಮೆಗೆ ಹೊಡೆಯುತ್ತ ಸಾಗಿದ ಗುಂಪು, ಆದ್ರೆ ಎಮ್ಮೆ ಇವ್ರಿಗೆ ಕೊಟ್ಟ ಪ್ರತ್ಯುತ್ತರ ಹೇಗಿದೆ ನೋಡಿ

ಅನೇಕರು ಕರ್ಮದ ಪರಿಕಲ್ಪನೆಯನ್ನು ನಂಬುತ್ತಾರೆ ಮತ್ತು ಒಬ್ಬರ ಕ್ರಿಯೆಗಳ ಪರಿಣಾಮಗಳನ್ನು ಅಂತಿಮವಾಗಿ ಎದುರಿಸಬೇಕಾಗುತ್ತದೆ ಎಂದು ಎಂಬುದು ಕರ್ಮಫಲದ ಪರಿಕಲ್ಪನೆ. ಅಂತಹ ಒಂದು ಶೀಘ್ರವೇ ತಾವು ಮಾಡಿದ ಕರ್ಮಕ್ಕೆ ತಕ್ಷಣವೇ ಪ್ರತಿಕ್ರಿಯೆ ಸಿಕ್ಕಿದ ತಾಜಾ ನಿದರ್ಶನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ವೀಡಿಯೊ ಸಾಕ್ಷಿಯಾಗಿದೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ಪುರುಷರ ಗುಂಪೊಂದು ಎಮ್ಮೆಯನ್ನು ಹೊಡೆಯುತ್ತ, ಕೂಗುತ್ತ, ಒಮ್ಮೆ ಓಡುವಾಗ ಮಜಾ ತೆಗೆದುಕೊಳ್ಳುತ್ತ ಬಂಡಿಯಲ್ಲಿ ಸಾಗುತ್ತಿದೆ. ಆದರೆ ಪೆಟ್ಟು ತಿನ್ನುತ್ತಿದ್ದ ಅದೇ ಎಮ್ಮೆ ಇವರಿಗೆ ಇನ್ಸ್ಟಂಟ್‌ ಕರ್ಮ ಫಲವನ್ನು ತಕ್ಷಣವೇ ತೋರಿಸಿದೆ. ಎಮ್ಮೆಯು ರ್ಸತ ವಿಭಜಕವನ್ನು ಹತ್ತಿದ ಬರೆಣಾಮ ಇವರು ಕುಳಿತ ಬಂಡಿಯು ಗಾಳಿಗೆ ಎಸೆಯಲ್ಪಟ್ಟು ಅದರ ಮೇಲಿದ್ದವರನ್ನು ನೇರವಾಗಿ ರಸ್ತೆಗೆ ಎಸೆಯುವುದನ್ನು ವೀಡಿಯೊ ತೋರಿಸುತ್ತದೆ.

ಎಮ್ಮೆ ಮೇಲೆ ಸವಾರಿ ಮಾಡುತ್ತಿರುವ ಐವರು ಬಂಡಿಯನ್ನು ಎಳೆಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕುದುರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದ ಮತ್ತಿಬ್ಬರು ಪುರುಷರೊಂದಿಗೆ ಎಮ್ಮೆಯ ಬಂಡಿಯ ಮೇಲೆ ಕುಳಿತವರು ರೇಸ್‌ನಲ್ಲಿರುವಂತೆ ತೋರುತ್ತಿದೆ. ಬೈಕ್‌ನಲ್ಲಿ ಬಂದ ಇನ್ನೂ ಕೆಲವರು ಹಾರ್ನ್ ಮಾಡುತ್ತಾ ಇವರನ್ನು ಹಿಂಬಾಲಿಸಿದ್ದಾರೆ. ಎಮ್ಮೆಯು ವೇಗವಾಗಿ ಓಡಲು ವ್ಯಕ್ತಿಯು ಎಮ್ಮೆಗೆ ಹೊಡೆತದ ಮೇಲೆ ಹೊಡೆತ ಕೊಡುತ್ತಿರುವಾಗ, ಅದು ಬಲಕ್ಕೆ ತಿರುಗಿತು. ಅದು ತಿರುಗುತ್ತಿದ್ದಂತೆ, ಅದರ ಬಂಡಿಯ ಒಂದು ಚಕ್ರವು ರಸ್ತೆ ವಿಭಜಕವನ್ನು ಬಡಿಯಿತು ಮತ್ತು ಬಂಡಿಯಲ್ಲಿ ಕುಳಿತವರು ಹಾರಿ ರಸ್ತೆಯ ಮೇಲೆ ಬಿದ್ದರು. ಕಸ್ವಾನ್ ವೀಡಿಯೊಗೆ ‘ಕರ್ಮ’ ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ.. ಕರ್ಮ ಹಿಟ್ಸ್ ಬ್ಯಾಕ್.”

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement