2020-21ನೇ ಸಾಲಿನ ಏಕಲವ್ಯ, ಜೀವಮಾನದ ಸಾಧನೆ, ಕರ್ನಾಟಕ ಕ್ರೀಡಾರತ್ನ, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಳ ಘೋಷಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಪ್ರಕಟಿಸಿದ್ದಾರೆ.
ಇಂದು, ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು. ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ಏಕಲವ್ಯ ಪ್ರಶಸ್ತಿ:
ಜೀವನ ಎಸ್‌.-ಅಥ್ಲೆಟಿಕ್ಸ್, ಅಶ್ವಿನಿ ಭಟ್-ಬ್ಯಾಡ್ಮಿಂಟನ್, ಕರುಣ್‍ ನಾಯರ-ಕ್ರಿಕೆಟ್, ಲೋಪಮುದ್ರಾ ತಿಮ್ಮಯ್ಯ-ಬಾಸ್ಕೆಟ್‍ಬಾಲ್, ದಾನಮ್ಮ ಚಿಚಖಂಡಿ – ಸೈಕ್ಲಿಂಗ್, ವಸುಂಧರಾ ಎಂ.ಎನ್-ಜುಡೋ, ಪ್ರಶಾಂತ್‍ಕುಮಾರ ರೈ-ಕಬಡ್ಡಿ, ಮುನೀರ್‌ ಬಾಷಾ-ಖೋ-ಖೋ, ನಿತಿನ್-ನೆಟ್‍ಬಾಲ್,
ತರುಣ ಕೃಷ್ಣ ಪ್ರಸಾದ್-ರೋಯಿಂಗ್, ಲಿಖಿತ್‍ ಎಸ್.ಪಿ-ಈಜು, ಅನರ್ಘ್ಯ ಮಂಜುನಾಥ್-ಟೇಬಲ್ ಟೆನ್ನಿಸ್, 13.ಅಶ್ವಲ್ರೈ-ವಾಲಿಬಾಲ್,ಪ್ರಧಾನ ಸೋಮಣ್ಣ- ಹಾಕಿ, ರಾಧಾ ವಿ.-ಪ್ಯಾರಾ ಅಥ್ಲೆಟಿಕ್ಸ್ .
ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ, 2 ಲಕ್ಷ ನಗದು ಬಹುಮಾನ ಒಳಗೊಂಡಿರುತ್ತದೆ.

ಜೀವಮಾನ ಸಾಧನೆ ಪ್ರಶಸ್ತಿ:
ಗಾವಂಕರ್‌ ಜಿ.ವಿ.-ಅಥ್ಲೆಟಿಕ್ಸ್, ಕ್ಯಾಪ್ಟನ್ ದಿಲೀಪ್ ಕುಮಾರ್-ಕಯಾಕಿಂಗ್ ಕನೋಯಿಂಗ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ನಗದು ಬಹುಮಾನ ಒಳಗೊಂಡಿದೆ.

ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ:
ಪೂಜಾ ಗಾಲಿ- ಆಟ್ಯಾ-ಪಾಟ್ಯಾ, .ಬಿ.ಎನ್.ಕಿರಣಕುಮಾರ್-ಬಾಲ್ ಬ್ಯಾಡ್ಮಿಂಟನ್, ಗೋಪಾಲ ನಾಯ್ಕ್- ಕಂಬಳ, ದೀಕ್ಷಾ ಕೆ- ಖೋ-ಖೋ, ಶಿವಯೋಗಿ ಬಸಪ್ಪ ಬಾಗೇವಾಡಿ- ಗುಂಡುಕಲ್ಲು ಎತ್ತುವುದು, ಲಕ್ಷ್ಮೀಬಿರೆಡೆಕರ್-ಕುಸ್ತಿ, 7.ಪಿ.ಗೋಪಾಲಕೃಷ್ಣ- ಯೋಗ, ರಾಘವೇಂದ್ರ ಎಸ್. ಹೊಂಡದಕೇರಿ- ಪವರ್‍ಲಿಫ್ಟಿಂಗ್, ಸಿದ್ದಪ್ಪಪಾಂಡಪ್ಪ ಹೊಸಮನಿ-ಸಂಗ್ರಾಣಿ ಕಲ್ಲು ಎತ್ತುವುದು, ಸೂರಜ ಎಸ್‌. ಅಣ್ಣಿಕೇರಿ-ಕುಸ್ತಿ, ಶಶಾಂಕ ಬಿ.ಎಂ ಪ್ಯಾರಾ -ಈಜು, ಡಿ.ನಾಗಾರಾಜು-ಯೋಗ, ಶ್ರೀವರ್ಷಿಣಿ- ಜಿಮ್ನಾಸ್ಟಿಕ್, ಅವಿನಾಶ್ವಿ ನಾಯ್ಕ- ಜುಡೋ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು 2014ರಿಂದ ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದೆ. – ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ರೂ.ನಗದು ಪುರಸ್ಕಾರ ಒಳಗೊಂಡಿದೆ.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ:
ಶ್ರೀ ಧರ್ಮಸ್ಥಳಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್, ಉಜಿರೆ ದಕ್ಷಿಣಕನ್ನಡ,
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆ,
ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆ ,
ಹೂಡಿ ಸ್ಪೋರ್ಟ್ಸ್‌ ಕ್ಲಬ್, ಬೆಂಗಳೂರು ನಗರ ಜಿಲ್ಲೆ
ಶ್ರೀ ಬಾಲಮಾರುತಿ ಸಂಸ್ಥೆ, ಧಾರವಾಡ,
ಎಮಿನೆಂಟ್ ಶೂಟಿಂಗ್ ಹಬ್, ಬೆಂಗಳೂರು ನಗರ ಜಿಲ್ಲೆ,
ಬಾಲಾಂಜನೇಯ ಜಿಮ್ನಾಸಿಯಂ (ರಿ.), ಮಂಗಳೂರು,
ಬಸವನಗುಡಿ ಅಕ್ವಾಟಿಕ್ ಸೆಂಟರ್, ಬೆಂಗಳೂರು ನಗರ ಜಿಲ್ಲೆ,
ದ್ರಾವಿಡ್‍ಪಡುಕೋಣೆ ಅಕಾಡೆಮಿ, ಬೆಂಗಳೂರು ನಗರ ಜಿಲ್ಲೆ,
ಪಿಪಲ್ ಎಜುಕೇಷನ್ಟ್ರಸ್ಟ್ ಮಂಡ್ಯ ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪ್ರವರ್ತಕರನ್ನು ಗುರುತಿಸಿ 2017-18ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ಪತ್ರ ಮತ್ತು 5 ಲಕ್ಷ ರೂ.ಗಳ ನಗದು ಪುರಸ್ಕಾರ ಒಳಗೊಂಡಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement