ನನ್ನ ಸಿಡಿ ತಯಾರಿಸಿದ ಮಹಾನಾಯಕನ ತಂಡವೇ ಸಂತೋಷ ಪಾಟೀಲ ಪ್ರಕರಣದ ಹಿಂದೆಯೂ ಇದೆ: ಹೊಸ ಬಾಂಬ್‌ ಸಿಡಿಸಿದ ರಮೇಶ ಜಾರಕಿಹೊಳಿ

ಬೆಳಗಾವಿ: ನನ್ನ ಸಿ.ಡಿ. ತಯಾರಿಸಿದ ಮಹಾನಾಯಕನ ತಂಡವೇ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ಹಿಂದಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

ಬಡಸ ಗ್ರಾಮದಲ್ಲಿನ ಮೃತ ಸಂತೋಷ ಪಾಟೀಲ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರ ಜೊತೆ ಜೊತೆ ಮಾತನಾಡಿದ ಅವರು, ಮಹಾನಾಯಕ ಮತ್ತು ಆತನ ತಂಡ ಹಲವು ಕುತಂತ್ರಗಳನ್ನು ಎಸಗುತ್ತಿವೆ. ಈ ಬಗ್ಗೆ ನನ್ನ ಬಳಿ ಎಲ್ಲ ದಾಖಲೆಗಳೂ ಇವೆ. ನನ್ನ ಸಿ.ಡಿ. ತಯಾರಿಸಿದ ಆ ತಂಡ ಇದೀಗ ಸಂತೋಷ ಪಾಟೀಲ ಆತ್ಮಹತ್ಯೆಯ ಹಿಂದಿದೆ. ಇದರ ಬಗ್ಗೆ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡುತ್ತೇನೆ. ಅವರು ಒಪ್ಪಿಗೆ ನೀಡಿದರೆ ಸೋಮವಾರ ಬಹಿರಂಗ ಪಡಿಸುತ್ತೇನೆ ಎಂದು ಬಾಂಬ್ ಸಿಡಿಸಿದ್ದಾರೆ.

ನನ್ನ ಪ್ರಕಾರ, ಸಂತೋಷ ಪಾಟೀಲ ಪ್ರಕರಣದ ವಿಚಾರದಲ್ಲಿ ಈಶ್ವರಪ್ಪ ಅವರು ರಾಜೀನಾಮೆ ಕೊಡಬಾರದು. ಇದರ ಹಿಂದೆ ಮಹಾನಾಯಕ ಇದ್ದಾನೆ. ಒಂದೇ ತಂಡದಿಂದ ಎಲ್ಲ ಕುತಂತ್ರ ನಡೆದಿದೆ, ಎರಡೂ ಪ್ರಕರಣಗಳನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement