ಮಧ್ಯಪ್ರದೇಶದ ನಂತರ, ಈಗ ಗುಜರಾತ್ ಖಂಭಾತ್‌ನಲ್ಲಿ ಗಲಭೆ ಆರೋಪಿಗಳ ಅಕ್ರಮ ಅಂಗಡಿಗಳ ಮೇಲೆ ಬುಲ್ಡೋಜರ್

ಅಹಮದಾಬಾದ್: ಮಧ್ಯಪ್ರದೇಶದ ನಂತರ ಗುಜರಾತ್ ಸರ್ಕಾರವು ಈಗ ಬುಲ್ಡೋಜರ್ ನ್ಯಾಯವನ್ನು ಜಾರಿಗೊಳಿಸುತ್ತಿದೆ. ರಾಮ ನವಮಿಯಂದು ಖಂಭತ್‌ನ ಶಕರ್‌ಪುರದಲ್ಲಿ ನಡೆದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದ ಸ್ಥಳದಲ್ಲಿ ಆರೋಪಿಗಳಿಗೆ ಸೇರಿದ ಅತಿಕ್ರಮಣಗಳನ್ನು ಕೆಡವಲು ಸರ್ಕಾರ ಆದೇಶಿಸಿದೆ.
ಅಧಿಕಾರಿಗಳ ಪ್ರಕಾರ, ಕಲ್ಲು ತೂರಾಟ ನಡೆದ ಸ್ಥಳವು ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಆಗಾಗ್ಗೆ ಕೋಮು ಉದ್ವಿಗ್ನತೆಗೆ ಕಾರಣವಾಗಿದ್ದು, ಇದನ್ನು ಶಾಶ್ವತವಾಗಿ ಪರಿಹರಿಸಲು ಪೊಲೀಸರು ಮತ್ತು ಆಡಳಿತವು ಈಗ ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರಿಂದ ತಾಲೂಕಿನಲ್ಲಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳ ಸುತ್ತಲಿನ ಅಕ್ರಮ ಒತ್ತುವರಿ ಸೇರಿದಂತೆ ಅಡೆತಡೆಗಳನ್ನು ತೆರವುಗೊಳಿಸಲು ಆಡಳಿತ ಮುಂದಾಗಿದೆ.

ದರ್ಗಾ ಮುಂಭಾಗದಲ್ಲಿದ್ದ ಅಂಗಡಿಗಳನ್ನು ಬುಲ್ಡೋಜರ್ ಮೂಲಕ ಆಡಳಿತ ಅದನ್ನು ಕೆಡವಿ ಹಾಕಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು. ಇದಲ್ಲದೆ, ಎಸ್‌ಡಿಎಂ ಸೇರಿದಂತೆ ಎಲ್ಲಾ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು. ಈ ಆಸ್ತಿಗಳು ಅಕ್ರಮವಾಗಿದ್ದು, ಇಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಲಭೆ ನಡೆದ ಸ್ಥಳವು ಅತ್ಯಂತ ಸೂಕ್ಷ್ಮವಾಗಿದೆ. ಆದ್ದರಿಂದ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಎಸ್‌ಡಿಎಂ ಮಾರ್ಗದರ್ಶನದಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಅಕ್ರಮ ಅಂಗಡಿಗಳನ್ನು ತೆಗೆದುಹಾಕಲಾಗಿದೆ ಮತ್ತು ಅಂತಹ ಅಗತ್ಯವಿದ್ದಲ್ಲಿ ಭವಿಷ್ಯದಲ್ಲಿ ಬೇರೆ ಯಾವುದೇ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಂಭತ್ (ಎಎಸ್‌ಪಿ)ಯ ಸಹಾಯಕ ಪೊಲೀಸ್ ಅಧೀಕ್ಷಕ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಪೂರ್ವ ಯೋಜಿತ ಪಿತೂರಿ ಎಂದು ಗುಜರಾತ್ ಪೊಲೀಸರು ಬುಧವಾರ ಹೇಳಿದ್ದಾರೆ. ಪೊಲೀಸರ ಪ್ರಕಾರ, ಕಲ್ಲು ತೂರಾಟಕ್ಕಾಗಿ ಹುಡುಗರನ್ನು ಹೊರಗಿನಿಂದ ಕರೆತಂದಿದ್ದಾರೆ ಮತ್ತು ಅವರು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರೆ ಅವರಿಗೆ ಎಲ್ಲಾ ರೀತಿಯ ಕಾನೂನು ಮತ್ತು ಆರ್ಥಿಕ ಸಹಾಯದ ಭರವಸೆ ನೀಡಲಾಯಿತು. ಸ್ಮಶಾನಗಳಲ್ಲಿ ಕಲ್ಲುಗಳು ಸುಲಭವಾಗಿ ಸಿಗುವುದರಿಂದ ಕಲ್ಲುಗಳನ್ನು ಹೊಡೆಯಲು ನಿರ್ಧರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮೆರವಣಿಗೆ ವೇಳೆ ಹಿಂಸಾಚಾರ ಮತ್ತು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement