ಹುಬ್ಬಳ್ಳಿ: ಹನುಮ ಜಯಂತಿ ದಿನವೇ ಧಾರಾವಾಡ ಜಿಲ್ಲೆಯ ಬುಡರಸಿಂಗಿy ಆಂಜನೇಯ ಮೂರ್ತಿಯಲ್ಲಿನ ಕಣ್ಣಿನಿಂದ ನೀರು ಬಿದ್ದ ಅಚ್ಚರಿಯ ಘಟನೆ ನಡೆದ ವರದಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಹುನುಮ ಜಯಂತಿ ದಿನವೇ ಹನುಮಂತನ ಮೂರ್ತಿ ಕಣ್ಣಿಂದ ನೀರು ಬರುತ್ತಿದ್ದು ಜನರ ಅಚ್ಚರಿಗೆ ಕಾರಣವಾಗಿದೆ.
ಈ ಆಂಜನೇಯ ದೇವಸ್ಥಾನ ಸುಮಾರು 700 ವರ್ಷಗಳ ಇತಿಹಾಸವಿದ್ದು, ಈ ದೇವಸ್ಥಾನವನ್ನು ಜಕಣಾಚಾರಿ ಕಟ್ಟಿದ್ದಾರೆಂಬ ಪ್ರತೀತಿ ಗ್ರಾಮದಲ್ಲಿದೆ.ಇತಿಹಾಸ ಪ್ರಸಿದ್ಧ ಹನುಮ ದೇವಸ್ಥಾನದಲ್ಲಿ ಈ ಘಟನೆಗೆ ಇಡೀ ಗ್ರಾಮಕ್ಕೆ ಗ್ರಾಮವೇ ಚಕಿತ ಗೊಂಡಿದ್ದು, ಎಲ್ಲರೂ ದೇವಸ್ಥಾನದಕ್ಕೆ ಆಗಮಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ