ಅಪಘಾತದಲ್ಲಿ ಪತಿ ಸಾವು: 6 ತಿಂಗಳ ಪುತ್ರನ ಕೊಂದು ಪತ್ನಿಯೂ ಆತ್ಮಹತ್ಯೆ

ಮಂಗಳೂರು: ಮಂಗಳೂರು ಅಗ್ನಿಶಾಮಕ ಇಲಾಖೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದಾ‌ಗ ಕಾರು ಢಿಕ್ಕಿ ಹೊಡೆದು ಸಾವಿಗೀಡಾಗಿದ್ದು, ಪತಿ ಸಾವಿನ ಸುದ್ದಿ ತಿಳಿದು ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ತನ್ನ ತಮ್ಮನ ಮನೆಯಲ್ಲಿದ್ದ ಪತ್ನಿ ತನ್ನ 6 ತಿಂಗಳ ಮಗುವನ್ನು

ಕೊಂದು ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ನಡೆದಿದೆ.
ಗಂಗಾಧರ ಬಿ. ಕಮ್ಮಾರ (36 ವರ್ಷ) ಅಪಘಾತದಲ್ಲಿ ಮೃತಪಟ್ಟ ಅಗ್ನಿಶಾಮಕ ಇಲಾಖೆ ಸಿಬ್ಬಂದಿ. ಶನಿವಾರ ರಾತ್ರಿ ೯ರ ಸುಮಾರಿಗೆ ಎನ್‌ಎಚ್-66 ರಲ್ಲಿ ಕುಂಟಿಕಾನ ಬಳಿ ರಸ್ತೆ ದಾಟುವಾಗ ಕಾರು ( XUV 500 ) ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು.

ತನ್ನ ಪತಿ ಅಪಘಾತದಲ್ಲಿ ಮೃತಪಟ್ಟಿರುವ ವಿಷಯ ತಿಳಿದ ಪತ್ನಿ ಶೃತಿ (30) ಅವರು ರಾತ್ರಿ 10 ಗಂಟೆಗೆ 6 ತಿಂಗಳ ಪುತ್ರ ಅಭಿರಾಮನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಶ್ರುತಿ ಅವರು ಆಗ ತಮ್ಮ ತಮ್ಮನ ಮನೆಯಲ್ಲಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement