ಏಪ್ರಿಲ್‌ ೨೫ರಂದು ಜಿಲ್ಲಾಮಟ್ಟದ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏಪ್ರಿಲ್‌ ೨೫ ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.

ಪ್ರಥಮ ಬಹುಮಾನ ೨೫೦೦೧, ದ್ವಿತೀಯ ಬಹುಮಾನ ೧೫೦೦೧, ತೃತೀಯ ೧೦೦೦೧, ಚತುರ್ಥ ಬಹುಮಾನ ೭೦೦೧ ರೂ.ಗಳ ಬಹುಮಾನವಿದೆ. ಭಾಗವಹಿಸುವ ತಂಡಗಳಿಗೆ ೮೦೧ ರೂ.ಗಳು ಶುಲ್ಕವಿದೆ.
ಟ್ರೋಫಿಯನ್ನು ಏಪ್ರಿಲ್‌ ೨೫ರಂದು ಸಂಜೆ ೭ ಗಂಟೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ನಂದೊಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹ ಕೋಣೆಮನೆ, ಎಲ್.ಎಸ್.ಎಂ.ಪಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ವಿವೇಕ ಹೆಬ್ಬಾರ್, ಪ್ರಕಾಶ ಹೆಗಡೆ ಲಿಂಗದಬೈಲು, ವಿಜಯ ಮಿರಾಶಿ, ರವಿ ಕೈಟ್ಕರ್, ನ್ಯಾಯವಾದಿ ಜಯರಾಮ ಸಿದ್ದಿ, ಗ್ರಾಪಂ ಸದಸ್ಯರಾದ ಟಿ.ಆರ್. ಹೆಗಡೆ, ನಾಗರತ್ನಾ ನಾಯ್ಕ, ಭವಾನಿ ಸಿದ್ದಿ, ಕಮಲಾ ಸಿದ್ದಿ, ಗೋಪಾಲ ಸಿದ್ದಿ ಮತ್ತಿತರರು ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಮಲಾ ಸಿದ್ದಿ, ಜಿ.ಎಂ. ತಾಂಡುರಾಯನ್, ಸಂಧ್ಯಾ ಹಂಗಾರಿ, ನಾರಾಯಣ ಶೇರುಗಾರ, ಲಕ್ಷ್ಮೀ ಸಿದ್ದಿ, ಅಂತೋನಿ ರೋಡ್ರಿಗ್ಸ್, ಶಾರದಾ ಸಿದ್ದಿ, ಅನಿಲ ಸಿದ್ದಿ, ನಾಗರಾಜ ಸಿದ್ದಿ, ರೋಹನ ತತ್ವಣಗಿ, ಮಹಾಲಕ್ಷ್ಮೀ ಸಿದ್ದಿ, ಅರ್ಪಣಾ ಸಿದ್ದಿ, ಲೀನಾ ಸಿದ್ದಿ ಮುಂತಾದ ೧೩ ವ್ಯಕ್ತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್‌- ೯೪೮೦೦೮೬೭೪೮, ೯೪೮೦೩೬೨೨೬೭, ೭೦೨೨೯೧೪೫೩೯, ೯೪೮೧೯೪೦೮೨೧ ಸಂಪರ್ಕಿಸಬಹುದಾಗಿದೆ. ಪಿಡಿಎಫ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ hbbar trophy

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement