ಬಹ್ರೈಚ್: ಕುಡಿದ ಅಮಲಿನಲ್ಲಿ ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಮಹಿಳಾ ಅಧಿಕಾರಿಯ ವಿರುದ್ಧ ಉತ್ತರ ಪ್ರದೇಶದ ಆಡಳಿತವು ತನಿಖೆಗೆ ಆದೇಶಿಸಿದೆ.
ದೇವಿಪತನ್ ಮಂಡಲದ ಉಪ ಕಾರ್ಮಿಕ ಆಯುಕ್ತೆ ರಚನಾ ಕೇಸರ್ವಾನಿ ಎಂದು ಗುರುತಿಸಲಾದ ಅಧಿಕಾರಿಯು ಕುಡಿದು ಬಹ್ರೈಚ್ ಪೊಲೀಸರಿಗೆ ‘ಬೆದರಿಕೆ’ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಹ್ರೈಚ್ ಜಿಲ್ಲೆಯ ಪೋಲಿಸ್ ಸ್ಟೇಷನ್ ಜರ್ವಾಲ್ ರಸ್ತೆಯದ್ದು ಹೇಳಲಾದ ವೀಡಿಯೊದಲ್ಲಿ, ಕೇಸರ್ವಾನಿ ಕುಡಿದು ಪೊಲೀಸ್ ಅಧಿಕಾರಿಗಳೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು.
“ನಾನು ವಿಭಾಗೀಯ ಮಟ್ಟದ ಅಧಿಕಾರಿ, ಜಿಲ್ಲಾ ಮಟ್ಟದ್ದಲ್ಲ; ನಾನು ಕಮಿಷನರ್ ಜೊತೆ ಮಾತನಾಡುತ್ತೇನೆ ಎಂದು ಈ ಮಹಿಳಾ ಅಧಿಕಾರಿಯು ಬಹ್ರೈಚ್ ಪೊಲೀಸರಿಗೆ ಬೆದರಿಕೆ ಹಾಕುವುದನ್ನು ಮತ್ತು ಮದ್ಯದ ಅಮಲಿನ ಸ್ಥಿತಿಯಲ್ಲಿ ರಸ್ತೆಯಲ್ಲಿ ಗಲಾಟೆ ಮಾಡುವುದನ್ನು ಕಾಣಬಹುದು. ಏತನ್ಮಧ್ಯೆ, ಒಬ್ಬ ಮಹಿಳಾ ಕಾನ್ಸ್ಟೇಬಲ್ ಅಧಿಕಾರಿಯನ್ನು ಅವರ ಕಾರಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ. ಆದರೆ ಮಹಿಳಾ ಅಧಿಕಾರಿ ಪದೇ ಪದೇ ಹೊರಬರಲು ಮತ್ತು ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಘಟನೆಯ ನಂತರ, ಪೊಲೀಸರು ಭಾನುವಾರ ವೈರಲ್ ವೀಡಿಯೊವನ್ನು ಉತ್ತರ ಪ್ರದೇಶದ ಕಾರ್ಮಿಕ ಇಲಾಖೆಗೆ ಉಲ್ಲೇಖಿಸಿ ಅಧಿಕಾರಿಯ ವಿರುದ್ಧ ತನಿಖೆಗೆ ವಿನಂತಿಸಿದ್ದಾರೆ.
ಜರ್ವಾಲ್ ರೋಡ್ ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಕುಮಾರ್ ಸಿಂಗ್ ಮಾತನಾಡಿ, ಏಪ್ರಿಲ್ 27 ರಂದು ಮಹಿಳಾ ಅಧಿಕಾರಿ ಲಕ್ನೋದಿಂದ ಗೊಂಡಾದಲ್ಲಿರುವ ತನ್ನ ಕಚೇರಿಗೆ ತನ್ನದೇ ಆದ ಕಾರನ್ನು ಚಲಾಯಿಸಿಕೊಂಡು ಪ್ರಯಾಣಿಸುತ್ತಿದ್ದರು. ದಾರಿ ತಪ್ಪಿದ ನಂತರ ಮಹಿಳೆಯ ಕಾರು ಬಹ್ರೈಚ್ ಕಡೆಗೆ ತಿರುಗಿ ಬಹ್ರೈಚ್ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ