ಶಿರಸಿ: ಉರಿಬಾನ ಬೆಳದಿಂಗಳು- ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ ಪುಸ್ತಕದ ಅವಲೋಕನ ನಾಳೆ

ಶಿರಸಿ: ಕೃಷ್ಣಿ ಶಿರೂರು ಅವರ ಉರಿಬಾನ ಬೆಳದಿಂಗಳು- ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ ಪುಸ್ತಕದ ಅವಲೋಕನ ಕಾರ್ಯಕ್ರಮ ಜೂನ್‌ ೪ರಂದು ಸಂಜೆ ೪ ಗಂಟೆಗೆ ಶಿರಸಿಯ ನಯನ ಸಭಾಂಗಣದಲ್ಲಿ ನಡೆಯಲಿದೆ. ನಯನ ಫೌಂಡೇಶನ್‌, ಕಸಾಪ ಶಿರಸಿ ಘಟಕ, ಇನ್ನರ್‌ ವೀಲ್‌ ಕ್ಲಬ್‌ ಶಿರಸಿ, ಶಿರಸಿ ಐಎಂಎ ಕನ್ನಡ ಬಳಗ ಹಾಗೂ ಐಎಂಎ ಮಹಿಳಾ ಬಳಗದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಹಾಗೂ ಸಂರಕ್ಷಣಾ ಶಾಸ್ತ್ರಜ್ಞ ಕೇಶವ ಕೂರ್ಸೆ ಅವರು ಕೃತಿ ಪರಿಚಯ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಹೆಗಡೆ ಬಕ್ಕಳ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಹಿರಿಯ ವೈದ್ಯರಾದ ಡಾ.ಆಶಾ ಪ್ರಭು ಹಾಗೂ ನೇತ್ರತಜ್ಞರಾದ ಡಾ. ಶಿವರಾಮ ಪಾಲ್ಗೊಳ್ಳಲಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement