ಬೆಂಗಳೂರು: ಮಾದಕ ವಸ್ತು ಸೇವನೆ ಆರೋಪದಲ್ಲಿ ಬಾಲಿವುಡ್‌ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್ ಬಂಧನ

ಬೆಂಗಳೂರು: ಭಾನುವಾರ ರಾತ್ರಿ ಬೆಂಗಳೂರು ನಗರದಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ದಾಂತ್ ಕಪೂರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಾರ್ಟಿ ಆಯೋಜಿಸಿದ್ದ ಪಂಚತಾರಾ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿದ್ದಾರೆ. ಬಾಲಿವುಡ್​ನ ಖ್ಯಾತ ನಟ ಶಕ್ತಿ ಕಪೂರ್​ ಅವರ ಮಗ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಸೇವನೆ ಮಾಡುತ್ತಿದ್ದುದು ದೃಢಪಟ್ಟಿದ್ದು ಹಲಸೂರು ಪೊಲೀಸರು ಠಾಣೆಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ.

ಹಲಸೂರು ಬಳಿಯ ಹೋಟೆಲ್​ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಾದಕ ದ್ರವ್ಯ ಸೇವಿಸಿರುವ ಶಂಕಿತ 35 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಪೊಲೀಸರು ಕಳುಹಿಸಿದ್ದರು. ಪರೀಕ್ಷೆ ಧನಾತ್ಮಕವಾಗಿ ಬಂದ ಆರು ಮಂದಿಯಲ್ಲಿ ಸಿದ್ಧಾಂತ ಕಪೂರ್ ಅವರ ಮಾದರಿ ಸೇರಿದೆ.
ಸಿದ್ಧಾಂತ ಕಪೂರ್ ಡ್ರಗ್ಸ್ ಸೇವಿಸಿ ಪಾರ್ಟಿಗೆ ಬಂದಿದ್ದಾರೆಯೇ ಅಥವಾ ಹೋಟೆಲ್‌ನಲ್ಲಿ ಸೇವಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.
ಹಿಂದಿ ಚಲನಚಿತ್ರ ತಾರೆ ಶಕ್ತಿ ಕಪೂರ್ ಅವರ ಪುತ್ರ, ಸಿದ್ದಾಂತ್ ಕಪೂರ್ ಕೂಡ 2020 ರ ವೆಬ್ ಸೀರೀಸ್ ‘ಭೌಕಾಲ್’ ನಲ್ಲಿ ಚಿಂಟು ದೇಧಾ ಪಾತ್ರ ಮಾಡಿದ್ದಾನೆ. ಅವರು ‘ಶೂಟೌಟ್ ಅಟ್ ವಡಾಲಾ’, ‘ಅಗ್ಲಿ, ‘ಹಸೀನಾ ಪಾರ್ಕರ್’, ‘ಚೆಹ್ರೆ’, ಮುಂತಾದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ‘ಭಾಗಂ ಭಾಗ್’, ‘ಚುಪ್ ಚುಪ್ ಕೆ’ ‘ಭೂಲ್ ಭುಲೈಯಾ’ ಮತ್ತು ‘ಧೋಲ್’.ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ವಿಚಾರಣೆಗೆ ಒಳಗಾದವರಲ್ಲಿ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಸೇರಿದ್ದಾರೆ. ಆದಾಗ್ಯೂ, ಗಣನೀಯವಾಗಿ ಏನೂ ಸಾಬೀತಾಗಲಿಲ್ಲ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಮುನ್ನೆಲೆಗೆ ಬಂದ ಡ್ರಗ್ಸ್ ಪ್ರಕರಣದ ತನಿಖೆಯ ಸಮಯದಲ್ಲಿ ಎನ್‌ಸಿಬಿ ಬಹಿರಂಗಪಡಿಸಿದ ವಾಟ್ಸಾಪ್ ಚಾಟ್‌ಗಳನ್ನು ಆಧರಿಸಿ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಪ್ರಶ್ನಿಸಲಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement