ಮುಂಬೈ: ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋದಿಂದ “ಸಚಿವ” ಪದವನ್ನು ಕೈಬಿಟ್ಟಿದ್ದಾರೆ.
ಪಕ್ಷದ ತಮ್ಮ ಸಹೋದ್ಯೋಗಿ ಏಕನಾಥ್ ಶಿಂಧೆಯವರ ಬಂಡಾಯದಿಂದಾಗಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ಆದಿತ್ಯ ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಿಂದ ಪ್ರವಾಸೋದ್ಯಮ, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಂಬ ಪದವನ್ನು ಅಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಅರವಿಂದ್ ಸಾವಂತ್, ಸಚಿವ ಶಬ್ದವನ್ನು ಪ್ರೊಫೈಲ್ನಿಂದ ಏಕೆ ತೆಗೆದು ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಬೆಳವಣಿಗೆ ಬಗ್ಗೆ ಹತಾಶೆಯಿಂದ ಇರಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿಂಧೆ ಅವರು ಇಂದು, ಬುಧವಾರ ಅಸ್ಸಾಂನ ಗುವಾಹತಿಗೆ ಆಗಮಿಸಿದ್ದು, 40 ಇತರ ಬಂಡಾಯ ಶಾಸಕರು, ಶಿವಸೇನೆಯ 33 ಮತ್ತು ಏಳು ಸ್ವತಂತ್ರರು ಸೇರಿದಂತೆ ಮೈತ್ರಿ ಸರ್ಕಾರವನ್ನು ಅಸ್ತಿತ್ವದ ಬಿಕ್ಕಟ್ಟಿಗೆ ತಳ್ಳಿದ್ದಾರೆ.
ಸರ್ಕಾರದಲ್ಲಿ ಶಿವಸೇನೆಯು 55 ಶಾಸಕರನ್ನು ಹೊಂದಿದೆ, ನಂತರದ ಮಿತ್ರಪಕ್ಷಗಳಾದ NCP (53) ಮತ್ತು ಕಾಂಗ್ರೆಸ್ (44) ಸಂಖ್ಯೆಯನ್ನು ಹೊಂದಿದ್ದು, 288 ಸದಸ್ಯರ ವಿಧಾನಸಭೆಯಲ್ಲಿ ಪ್ರಸ್ತುತ ಸರಳ ಬಹುಮತದ ಮಾರ್ಕ್ 144 ಆಗಿದೆ. ಗುಜರಾತಿನ ಸೂರತ್ ನಗರದಲ್ಲಿ 14 ರಿಂದ 15 ಸೇನಾ ಶಾಸಕರು, ಕೆಲವು ಸಚಿವರು ಸೇರಿದಂತೆ ಶಿಂಧೆ ಅವರೊಂದಿಗೆ ಇದ್ದಾರೆ ಎಂದು ಶಿವಸೇನೆ ವಕ್ತಾರ ಸಂಜಯ ರಾವುತ್ ಹೇಳಿದ್ದಾರೆ. ಆದರೆ, ಪಕ್ಷದ ಮತ್ತೊಬ್ಬ ಮುಖಂಡರು ಈ ಸಂಖ್ಯೆ 23 ಆಗಿರಬಹುದು ಎಂದು ಹೇಳಿದ್ದಾರೆ.
ಪಕ್ಷದ ನಾಯಕ ಏಕನಾಥ್ ಶಿಂಧೆ ಅವರು ತಮಗೆ ಶಿವಸೇನಾ ನಾಯಕತ್ವದ ವಿರುದ್ಧ ಯಾವುದೇ ಆಕ್ಷೇಪಗಳಿಲ್ಲ. ಆದರೆ ಎನ್ಸಿಪಿ ಮತ್ತು ಕಾಂಗ್ರೆಸ್ನ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಬಾಳಾ ಸಾಹೇಬ್ ಠಾಕ್ರೆ ಅವರ ಹಿಂದುತ್ವದಲ್ಲಿ ನಂಬಿಕೆ ಇಟ್ಟಿರುವ ತಾವು ಶಿವಸೇನೆಯು ಬಿಜೆಪಿ ಜೊತೆ ಮೈತ್ರಿ ಹೊಂದಬೇಕು ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ