ಮುಂಬೈ: ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ಆದಿತ್ಯ ಠಾಕ್ರೆ ಹೊರತುಪಡಿಸಿ, ಎಲ್ಲಾ ಎಂಟು ಸಚಿವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ತೊರೆದು ಗುವಾಹತಿಯಲ್ಲಿ ಬಂಡಾಯ ಶಿವಸೇನೆ ಸಚಿವ ಏಕನಾಥ್ ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ.
ವಿಧಾನಸಭೆಯಿಂದ ಸಚಿವರಾದವರಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಜೊತೆಗೆ ಮಗ ಆದಿತ್ಯ ಠಾಕ್ರೆ ಮಾತ್ರ ಉಳಿದಿದ್ದಾರೆ. ಕುತೂಹಲಕಾರಿಯಾಗಿ, ಶನಿವಾರ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಉದಯ್ ಸಾಮಂತ್ ಅವರು ಉದ್ಧವ ಠಾಕ್ರೆ ತೊರೆದವರಲ್ಲಿ ಸೇರಿದ್ದಾರೆ. ಶಿಂಧೆಯ ಶಿಬಿರವನ್ನು ಸೇರಲು ಅವರು ಭಾನುವಾರ ಸದ್ದಿಲ್ಲದೆ ಸೂರತ್ಗೆ ತೆರಳಿದರು.
ಎಂವಿಎ ಸರ್ಕಾರವನ್ನು ತೊರೆದ ಎಂಟು ಸಚಿವರಲ್ಲಿ ಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್, ದಾದಾ ಭೂಸೆ, ಸಂದೀಪನ್ ಭೂಮಾರೆ, ಶಂಭುರಾಜೇ ದೇಸಾಯಿ, ಅಬ್ದುಲ್ ಸತ್ತಾರ್, ಉದಯ್ ಸಾಮಂತ್ ಮತ್ತು ಬಚ್ಚು ಕಾಡು ಸೇರಿದ್ದಾರೆ. ಅವರು ಈಗ ಗುವಾಹತಿಯಲ್ಲಿ ಬೀಡು ಬಿಟ್ಟಿದ್ದಾರೆ. ವಿಧಾನ ಪರಿಷತ್ತು ಪ್ರತಿನಿಧಿಸುವ ಇಬ್ಬರು ಸಚಿವರಾದ ಸುಭಾಷ್ ದೇಸಾಯಿ ಮತ್ತು ಅನಿಲ್ ಪರಬ್ ಅವರು ಮಾತ್ರ ಉದ್ಧವ್ ಅವರೊಂದಿಗೆ ಉಳಿದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ