16 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಶ್ರೀನಾಥ್ ಮಹದೇವ ಜೋಷಿ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಲೋಕಾಯುತ್ತದ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು ಸಂಚಾರ ಪೊಲೀಸ್ ನ ಪೂರ್ವ ಡಿಸಿಪಿ ಕೆ.ಎಂ ಶಾಂತರಾಜು ಅವರನ್ನು ಬೆಸ್ಕಾಂ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದಂತ ಸಿ ಕೆ ಬಾಬು ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ ಪಾಟೀಲ್ ಅವರನ್ನು ಬೆಳಗಾವಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸೆಂಟ್ರಲ್ ವಿಭಾಗದ ಎಸಿಪಿಯ ಎಸ್ಪಿ ಕಲಾ ಕೃಷ್ಣಮೂರ್ತಿಯವರನ್ನು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ವರ್ಗಾವಣೆಯಾದ 16 ಅಧಿಕಾರಿಗಳು

ಶ್ರೀನಾಥ ಮಹದೇವ ಜೋಷಿ- ಲೋಕಾಯುಕ್ತ ಎಸ್ಪಿ
ಕೆ.ಎಂ. ಶಾಂತರಾಜು- ಬೆಸ್ಕಾಂ ಎಸ್ಪಿ
ಸಂಜೀವ ಎಂ.ಪಾಟೀಲ್- ಬೆಳಗಾವಿ ಎಸ್​ಪಿ
ಲೋಕೇಶ್ ಭರಮಪ್ಪ- ಧಾರವಾಡ ಎಸ್ಪಿ
ಸಿ.ಕೆ. ಬಾಬಾ- ಡಿಸಿಪಿ, ಆಗ್ನೇಯ ವಿಭಾಗ
ಕಲಾ ಕೃಷ್ಣಸ್ವಾಮಿ- ಟ್ರಾಫಿಕ್ ಡಿಸಿಪಿ
ಹರೀಶ್ ಪಾಂಡೆ- ಎಸಿಬಿ ಎಸ್ಪಿ
ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ
ಶ್ರೀನಾಗೇಶ್- ಚಿಕ್ಕಬಳ್ಳಾಪುರ ಎಸ್ಪಿ
ಶ್ರೀನಿವಾಸ್ ಗೌಡ- ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ
ಮಿಥುನ್ ಕುಮಾರ- ಬೆಂಗಳೂರು ಸಿಐಡಿ ಎಸ್ಪಿ
ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ
ಹರಿರಾಮ್ ಶಂಕರ್- ಹಾಸನ ಎಸ್ಪಿ
ಜಯಪ್ರಕಾಶ್- ಬಾಗಲಕೋಟೆ ಎಸ್ಪಿ
ಶೋಭರಾಣಿ- ಎಸಿಬಿ ಎಸ್​ಪಿ
ಶ್ರೀನಿವಾಸ್ ರಜಪೂತ್- ಹುಮ್ನಾಬಾದ್ ಸಬ್ ಡಿವಿಷನ್ ಎಎಸ್ಪಿ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement