ಉದಯಪುರ ಟೈಲರ್‌ ಹತ್ಯೆ ಖಂಡಿಸಿ ಹಿಂದೂ ಲೈವ್ಸ್ ಮ್ಯಾಟರ್ ಫಲಕ ಹಿಡಿದ ನಟಿ ಪ್ರಣಿತಾ

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಭೀಕರ ಹತ್ಯೆ ಖಂಡಿಸಿ ದೇಶಾದ್ಯಂತ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಹಲವರು ಪ್ರತಿಭಟನಾರ್ಥವಾಗಿ ಹಲವು ಅಭಿಯಾನವನ್ನು ಮಾಡುತ್ತಿದ್ದಾರೆ.
ಬಹುಭಾಷಾ ನಟಿ ಪ್ರಣಿತಾ ಸುಭಾಷ ಕೂಡ ವಿಭಿನ್ನ ರೀತಿಯಲ್ಲಿ ಈ ಘಟನೆಯನ್ನು ಖಂಡಿಸಿದ್ದಾರೆ. ಹಿಂದೂ ಲೈವ್ಸ್ ಮ್ಯಾಟರ್ ಎಂದು ಬರೆದಿರುವ ಫಲಕ ಹಿಡಿದುಕೊಂಡು ಅವರು ಭೀಕರ ಕೃತ್ಯವನ್ನು ಖಂಡಿಸಿದ್ದಾರೆ.
ಇಸ್ ಎನಿವನ್ ಲಿಸನಿಂಗ್? ಎಂಬ ಕ್ಯಾಪ್ಶನ್‌ನೊಂದಿಗೆ ಫೋಟೋವೊಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮತಾಂಧತೆಗೆ ಹಿಂದೂ ಜೀವಗಳ ಬಲಿ ಕೊಡಬೇಡಿ ಎಂದು ಸಂದೇಶ ಸಾರಿದ್ದಾರೆ.

ನಂಜನಗೂಡಿನಲ್ಲಿ ವ್ಯಾಪಾರಿಗಳ ವಿಭಿನ್ನ ಅಭಿಯಾನ..:
ಉದ್ಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ಖಂಡಿಸಿ ನಂಜನಗೂಡಿನಲ್ಲೂ ಕೆಲ ವ್ಯಾಪಾರಿಗಳು ನನ್ನ ಕತ್ತು ಸೀಳಬೇಡಿ ಎಂದು ಬೋರ್ಡ್ ಹಿಡಿದುಕೊಂಡು ಅಭಿಯಾನ ಪ್ರಾರಂಭಿಸಿದ್ದಾರೆ. ನಾನು ಸತ್ಯ ಹೇಳಲ್ಲ. ಹೇಳಿದವರ ಪರ ನಿಲ್ಲುವುದೂ ಇಲ್ಲ. ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ ಎಂದು ಪೋಸ್ಟರ್ ಹಿಡಿದುಕೊಂಡು ಹಲವರು ಟೈಲರ್ ಹತ್ಯೆಗೆ ವಿಭಿನ್ನ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement