ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಠಾಣೆಗೆ ಬಂದು ಶರಣಾದ ತಂದೆ

ಕಲಬುರಗಿ : ತನ್ನ ಹೆಂಡತಿ ಬೇರೆಯವರ ಜೊತೆ ಮನೆ ಬಿಟ್ಟು ಓಡಿಹೋದಳು ಎಂಬ ಕಾರಣಕ್ಕೆ  ನಾಲ್ವರು ಮಕ್ಕಳ ತಂದೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಗರದ ಭೋವಿ ಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಅಪ್ಪನಿಂದ ಕೊಲೆಯಾದ ಬಾಲಕಿಯರನ್ನು ಸೋನಿ(11) ಮಯೂರಿ (9) )ಎಂದು ಗುರುತಿಸಲಾಗಿದೆ. ಆಟೋ ಚಾಲಕನಾಗಿದ್ದ ತಂದೆ ಲಕ್ಷ್ಮೀಕಾಂತನೇ ಕತ್ತು ಹಿಚುಕಿ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

ಲಕ್ಷ್ಮಿಕಾಂತ್ ಪತ್ನಿ ಬೇರೆಯವರನ ಜೊತೆ ಮನೆ ಬಿಟ್ಟು ಹೋಗಿದ್ದಳು. ಇದರಿಂದಾಗಿ ಲಕ್ಷ್ಮೀಕಾಂತ ತನ್ನ ನಾಲ್ವರು ಮಕ್ಕಳನ್ನು ಅಜ್ಜಿಯ ಮನೆಗೆ ಕಳುಹಿಸಿದ್ದ. ಮೊನ್ನೆಯಷ್ಟೇ ಸೋನಿ ಮತ್ತು ಮಯೂರಿಯನ್ನು ಮನೆಗೆ ವಾಪಸ್‌ ಕರೆದುಕೊಂಡು ಬಂದಿದ್ದ. ಭಾನುವಾರ, ಸೋಮವಾರ ಮಕ್ಕಳನ್ನು ದಿನವಿಡೀ ಅಟೋದಲ್ಲಿ ಊರು ಸುತ್ತಿಸಿದ್ದ ಹಾಗೂ ಅವರಿಗೆ ಕೇಳಿದ್ದನ್ನು ಕೊಡಿಸಿದ್ದ. ಮಂಗಳವಾರ ಸಂಜೆ ಏನಾಯಿತೋ ಏನೋ ಇಬ್ಬರು ಮಕ್ಕಳನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಬಳಿಕ ಶವನ್ನು ಬುಧವಾರ ಬೆಳಗ್ಗೆಯಿಂದ ಆಟೋದಲ್ಲಿ ಇಟ್ಟುಕೊಂಡು ನಗರದಲ್ಲಿ ತಿರುಗಾಡಿದ್ದಾನೆ. ಸಂಜೆ ಹೊತ್ತಿಗೆ ತನ್ನ ಮತ್ತಿಬ್ಬರು ಮಕ್ಕಳೊಂದಿಗೆ  ಲಕ್ಷ್ಮೀಕಾಂತ್  ಎಂ.ಬಿ.ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement