ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ 14 ಅಡಿ ಉದ್ದದ ಸುಮಾರು ಒಂದು ಕ್ವಿಂಟಲ್ ತೂಕದ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ.
ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರಿಗೆ ಈ ಹೆಬ್ಬಾವು ಕಂಡಿದೆ. ಈ ದೈತ್ಯ ಗಾತ್ರದ ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅವರು ತಕ್ಷಣವೇ ಜಮೀನಿನ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಅವರು ಸ್ನೇಕ್ ಚಾಂಪ್ ಅವರಿಗೆ ಈ ಮಾಹಿತಿ ತಿಳಿಸಿದ ನಂತರ ಅವರು ಆಗಮಿಸಿದ್ದಾರೆ.
ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಈ ದೈತ್ಯಾಕಾರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಹಾವನ್ನು ಹಿಡಿದು ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು. ಹೆಬ್ಬಾವು ಒಂದು ಜಿಂಕೆಯನ್ನು ನುಂಗಿದೆ ಎಂದು ಅವರು ಹೇಳುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ