ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿದ್ರೂ ವಸ್ತುಗಳ ದರ ಹೆಚ್ಚಿಸುವ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು: ನಾವು ಹಾಲು,‌ ಮೊಸರನ್ನು ಪ್ಯಾಕ್ ಮಾಡಿ ಮಾರಾಟ ಮಾಡುವವರಿಗೆ ಮಾತ್ರ ಜಿಎಸ್‌ಟಿ ಹಾಕಲಾಗಿದೆ. ಆದರೆ ಸಾಮಾನ್ಯವಾಗಿ ಮಾರಾಟ ಮಾಡುವವರಿಗೆ ಹಾಕಿಲ್ಲ. ಅದನ್ನು ಮರು ಪಾವತಿ ಮಾಡಲು ಅವಕಾಶವಿದೆ‌. ಹೀಗಾಗಿ ಜಿಎಸ್ ಟಿ ಇದ್ದರೂ ವಸ್ತುಗಳ ದರ ಹೆಚ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬ್ರಾಂಡೆಡ್ ಇದ್ದವರಿಗೆ ಮಾತ್ರ 5% ಜಿಎಸ್ ಟಿ ಹಾಕಿದ್ದೇವೆ. ಇದಕ್ಕೆ ಮರುಪಾವತಿ ಮಾಡುವ ಸಾಧ್ಯತೆಯಿದೆ. ವ್ಯಾಪಾರಿಗಳು ದಾಖಲೆ ಸಲ್ಲಿಸಿ ಮರುಪಾವತಿ ಪಡೆಯಬೇಕು ಎಂದರು.

ಹೀಗೆ ಮಾಡದಿದ್ದರೆ ಗ್ರಾಹಕರಿಗೆ ತೆರಿಗೆ ಬೀಳುತ್ತಿತ್ತು. ಇದನ್ನು ಮರುಪಾವತಿ ಮಾಡಿದರೆ ಈಗಿರುವ ದರ ಹೆಚ್ಚಳ ಆಗುವುದಿಲ್ಲ. ಇದರ ಬಗ್ಗೆ ನಾವು ಗಮನ ಕೊಡುತ್ತೇವೆ. ಮರುಪಾವತಿ ಮಾಡುವ ಅವಕಾಶವನ್ನು ಅವರು ಪಡೆದುಕೊಳ್ಳಬೇಕು. ಇದನ್ನು ಜಿಎಸ್ ಟಿ ಕೌನ್ಸಿಲ್ ನಲ್ಲಿ ಮಾತಾಡುತ್ತೇವೆ ಹಾಗೂ ಜಿಎಸ್‌ಟಿ ಮಂಡಳಿ ಮೂಲಕ ನಿರ್ದೇಶನ ಕೊಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement