ಕುಮಟಾ: ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ ನಿಧನ

ಕುಮಟಾ: ನಗರದ ವಕೀಲ ಹಾಗೂ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಂಕರ ಶಾಸ್ತ್ರೀ (52) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ನಗರದಲ್ಲಿ ಟಿವಿಎಸ್ ದ್ವಿಚಕ್ರ ವಾಹನ ಶೋ ರೂ ನಡೆಸುತ್ತಿದ್ದ ಇವರು ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ಶಂಕರ ಶಾಸ್ತ್ರೀಯವರು ಕುಮಟಾದ ಖ್ಯಾತ ವಕೀಲರಾದ ಶ್ರೀಪಾದ ಶಾಸ್ತ್ರೀ ಅವರ ಮಗ. ಶಂಕರ ಶಾಸ್ತ್ರೀ ಅನೇಕ ಸಾಮಾಜಿಕ ಕಾರ್ಯ ದಲ್ಲಿಯೂ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಸಹೋದರರನ್ನು ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ.
ಕುಮಟಾ ವಕೀಲರ ಸಂಘದ ಅಧ್ಯಕ್ಷ ರಾದ ಆರ್. ಜಿ. ನಾಯ್ಕ ಅವರು ಶಂಕರ ಶಾಸ್ತ್ರೀ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement