ಬೆಳಗಾವಿ: ಭೀಕರ ಅಪಘಾತದಲ್ಲಿ ಎಎಸ್‌ಐ ಪತ್ನಿ, ಮಗಳು ಸೇರಿ ನಾಲ್ವರು ಸಾವು

ಬೆಳಗಾವಿ: ಸಿಮೆಂಟ್ ಲಾರಿ ಹಾಗೂ ಕಾರು ಹಾಗೂ ದ್ವಿಚಕ್ರ ವಾಹನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಎಎಸ್‌ಐ ಪತ್ನಿ, ಪುತ್ರಿ, ಕಾರು ಚಾಲಕ ಸೇರಿ ನಾಲ್ವರು ಮೃತಪಟ್ಟ ಘಟನೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ಬೆಳಗಾವಿ ನಿವಾಸಿಗಳಾದ ಕುಡಚಿ ಠಾಣೆ ಎಎಸ್‌ಐ ಪರುಶರಾಮ ಹಲಕಿ ಎಂಬವರ ಪತ್ನಿ ರುಕ್ಮಿಣಿ ಹಲಕಿ (48), ಅಕ್ಷತಾ ಹಲಕಿ (24), ನಿಖಿಲ್ ಕದಂ (24) ಹಾಗೂ ಹನುಮವ್ವ ಚಿಕ್ಕಲಕಟ್ಟಿ (65) ಎಂದು ಗುರುತಿಸಲಾಗಿದೆ.

ಸಿಮೆಂಟ್ ತುಂಬಿದ ಲಾರಿ ಗೋವಾ ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.‌ ಎದುರಿನಿಂದ ಬಂದ ಕಾರಿಗೆ ಲಾರಿ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಢಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ಕುಡಚಿ ಠಾಣೆ ಎಎಸ್‌ಐ ಪರುಶರಾಮ ಹಲಕಿ ಎಂಬವರ ಪತ್ನಿ ರುಕ್ಮಿಣಿ ಹಾಗೂ ಮಗಳು ಅಕ್ಷತಾ ಕಾರಿನಲ್ಲಿದ್ದ ಚಾಲಕ ಮೂವರು ಮೃತಪಟ್ಟಿದ್ದಾರೆ.‌ ಬೈಕ್ ಮೇಲೆನದ್ದ ವೃದ್ಧೆ ಹನುಮವ್ವ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement