ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೋಟೆಲ್ಗಳ ಕಾರ್ಯಚಟುವಟಿಕೆಗೆ ತಡರಾತ್ರಿ ಒಂದು ಗಂಟೆಯವರೆಗೂ ಅವಕಾಶ ನೀಡಿ ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ/ ತಿನಿಸು ಮಾರಾಟ ಮಾಡುವ ಸ್ಥಳಗಳ ವ್ಯಾಪಾರ ಅವಧಿಯನ್ನು ಮಧ್ಯರಾತ್ರಿ 1 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಅಧಿಸೂಚನೆ 2016 ಜೂನ್ 25ರ ಅನ್ವಯ ಹೋಟೆಲ್ಗಳು ಮಧ್ಯರಾತ್ರಿ ಒಂದು ಗಂಟೆವರೆಗೂ ಕಾರ್ಯನಿರ್ವಹಿಸಲು ಅವಕಾಶವಿದ್ದರೂ ಪೊಲೀಸರು 11 ಗಂಟೆಗೆ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತಿರುವ ಬಗ್ಗೆ ಬೃಹತ್ ಹೋಟೆಲ್ಗಳ ಸಂಘ ನೀಡಿದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.
ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಬೇರೆ ಪ್ರದೇಶಗಳಿಂದ ಆಗಮಿಸುವವರಿಗೆ ಅನನುಕೂಲಗಳಾಗುತ್ತಿತ್ತು. ಹಾಗೂ ಸ್ಥಳೀಯರಿಗೂ ರಾತ್ರಿ ವೇಳೆ ಊಟ ಮತ್ತು ವಸತಿ ಸೌಕರ್ಯ ಸಿಗದಂತಾಗಿತ್ತು. ಹೀಗಾಗಿ ಆರಂಭಿಕವಾಗಿ ರಾತ್ರಿ ಒಂದು ಗಂಟೆವರೆಗೂ ಹೋಟೆಲ್ಗಳ ಕಾರ್ಯಚಟುವಟಿಕೆ, ತಿಂಡಿ ತಿನಿಸುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ