ನಾಯಿಗೆ ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನೇ ಹೊಡೆದು ಕೊಂದ…!

ಪಲಕ್ಕಾಡ್: ನಾಯಿಗೆ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ 21 ವರ್ಷದ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಕೊಂದ ಆರೋಪಿಯನ್ನು ಕೊಪ್ಪಂ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ, ಹರ್ಷದ್ (21)ನಾಯಿಗೆ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಅವರ ಸೋದರಸಂಬಂಧಿ ಹಕೀಮ್ (27) ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಹರ್ಷದ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಕಳೆದ ಶುಕ್ರವಾರ, ಕೇರಳದ ಪಲಕ್ಕಾಡ್ ಜಿಲ್ಲೆಯ ಪೆರುಂಬ್ರತೊಡಿ, ಮುಳಯಂಕಾವು ಎಂಬಲ್ಲಿ 21 ವರ್ಷದವನ ಮೇಲೆ ನಾಯಿಗೆ ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿತ್ತು. ನಾಯಿ ಬೆಲ್ಟ್ ಮತ್ತು ಮರದ ಕೋಲಿನಿಂದ ಥಳಿಸಲಾಗಿತ್ತು. ಗಾಯಾಳುವನ್ನು ಹಕೀಮ್ ಆಸ್ಪತ್ರೆಗೆ ಕರೆದೊಯ್ದರು. ತನ್ನ ಸೋದರಸಂಬಂಧಿ ಮನೆಯ ಮೇಲ್ಛಾವಣಿಯಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿದ್ದಾನೆ ಎಂದು ಕೊಪ್ಪಂ ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಮೃತನನ್ನು ಕ್ರೂರವಾಗಿ ಥಳಿಸಲಾಗಿದೆ ಎಂದು ವೈದ್ಯರು ಖಚಿತವಾಗಿ ನಂಬಿದ್ದರು, ಏಕೆಂದರೆ ದೇಹದ ಮೇಲಿನ ಗುರುತುಗಳಿಂದ ಅದು ವೈದ್ಯರಿಗೆ ಸ್ಪಷ್ಟವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಹರ್ಷದ್ ಗಾಯಗೊಂಡು ಸಾವನ್ನಪ್ಪಿದ್ದಾನೆ. ಪಕ್ಕೆಲುಬು ಮುರಿತ ಮತ್ತು ಆಂತರಿಕ ರಕ್ತಸ್ರಾವವೇ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹರ್ಷದ್ ಮತ್ತು ಹಕೀಮ್ ಪೆರುಂಬ್ರತೋಡಿಯಲ್ಲಿ ಒಟ್ಟಿಗೆ ಇದ್ದು ಮೊಬೈಲ್ ಕೇಬಲ್ ಕೆಲಸ ಮಾಡುತ್ತಿದ್ದರು. ನಾಯಿಗೆ ಆಹಾರ ನೀಡದಿದ್ದಕ್ಕೆ ಹರ್ಷದ್‌ಗೆ ಹಕೀಂ ಥಳಿಸಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement