ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ‘ಅಪಹರಣಕ್ಕೊಳಗಾದ’ ಗುಜರಾತ್ ಎಎಪಿ ಅಭ್ಯರ್ಥಿ: ಸ್ವಯಂಪ್ರೇರಿತವಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದ ಜರಿವಾಲಾ

ಎಎಪಿ ತನ್ನ ಗುಜರಾತ್ ಚುನಾವಣಾ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂಬ ಹೇಳಿಕೆ ನೀಡಿದ ನಂತರ ಈ ಪ್ರಕರಣ ನಾಟಕೀಯ ತಿರುವು ಪಡೆದಿದ್ದು, ಅಪಹರಣಕ್ಕೊಳಗಾದ ನಾಯಕ ತನ್ನದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಎಎಪಿ ಕಾರ್ಯಕರ್ತರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜರಿವಾಲಾ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನನ್ನು ಅಪಹರಿಸಿಲ್ಲ ಮತ್ತು ತಾನು ಮಗನ ಸ್ನೇಹಿತರೊಂದಿಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಸೂರತ್ (ಪೂರ್ವ) ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಕಾರ್ಯಕರ್ತರು ರಾಜೀನಾಮೆ ನೀಡಲು ಪ್ರಾರಂಭಿಸಿದ್ದು ನನ್ನ ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವಾಗಿತ್ತು. ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದರು. ನಾನು 80 ಲಕ್ಷದಿಂದ 1 ಕೋಟಿ ರೂ.ವರೆಗೆ ಖರ್ಚು ಮಾಡುವಷ್ಟು ಸಾಮರ್ಥ್ಯ ಹೊಂದಿಲ್ಲ. ಆದರೆ ಅವರ ಬೇಡಿಕೆ ತುಂಬಾ ಇತ್ತು. ಅದನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಜರಿವಾಲಾ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಜರಿವಾಲಾ ಅವರನ್ನು ಬಿಜೆಪಿಯವರು “ಅಪಹರಿಸಿದ್ದಾರೆ ಎಂದು ನಿನ್ನೆ ಎಎಪಿ ಆರೋಪಿಸಿತ್ತು. ಜರಿವಾಲಾ ಅವರನ್ನು ಚುನಾವಣಾ ಕಚೇರಿಗೆ ಎಳೆದೊಯ್ದರು ಮತ್ತು ಬಂದೂಕು ತೋರಿಸಿ ನಾಮಪತ್ರವನ್ನು ಹಿಂಪಡೆಯಲು ಒತ್ತಾಯಿಸಿದರು ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿತ್ತು.
ಪಕ್ಷದ ಕಡೆಯಿಂದ ಸಾಕಷ್ಟು ಒತ್ತಡವಿತ್ತು, ಜನ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ, ನಾನು ನನ್ನ ಮಗನ ಸ್ನೇಹಿತರ ಜೊತೆ ಹೋದೆ, ಬಿಜೆಪಿಯವರು ಯಾರೂ ಇರಲಿಲ್ಲ, ಈಗ ಏನು ಮಾಡಬೇಕು, ಆರೇಳು ದಿನಗಳ ನಂತರ ಹೇಳುತ್ತೇನೆ ಎಂದು ಜರಿವಾಲಾ ಹೇಳಿದರು.
ಎಎಪಿ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕಾಗಿ ತಮ್ಮ ಕ್ಷೇತ್ರದ ಜನರು ಅವರನ್ನು “ದೇಶವಿರೋಧಿ” ಮತ್ತು “ಗುಜರಾತ್ ವಿರೋಧಿ” ಎಂದು ಹಣೆಪಟ್ಟಿ ಕಟ್ಟಿದ್ದರಿಂದ ಅವರ ಆತ್ಮಸಾಕ್ಷಿಯನ್ನು ಆಲಿಸಿ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ಜರಿವಾಲಾ ಹೇಳಿದರು.

ಪ್ರಮುಖ ಸುದ್ದಿ :-   ದೀದಿಗೆ ಶಾಕ್‌ ಮೇಲೆ ಶಾಕ್‌ ; ಹೊರಬಿತ್ತು ಎನ್‌ಡಿಎಗೆ ಬೆಂಬಲ ಸೂಚಿಸಿದ 19 ಟಿಎಂಸಿ ಸಂಸದರ ಪಟ್ಟಿ ; ಯಾರೆಲ್ಲ ಇದ್ದಾರೆ ಗೊತ್ತೆ ?

ಇದಕ್ಕೂ ಮುನ್ನ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಂಗಳವಾರದಿಂದ ಜರಿವಾಲಾ ಅವರ ಕುಟುಂಬ ಸದಸ್ಯರೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ ದಯನೀಯವಾಗಿ ಸೋಲುತ್ತಿದೆ ಮತ್ತು ಸೂರತ್ ಪೂರ್ವದಿಂದ ನಮ್ಮ ಅಭ್ಯರ್ಥಿಯನ್ನು ಅಪಹರಿಸುವ ಮಟ್ಟಕ್ಕೆ ಅದು ಕುಸಿದಿದೆ ಎಂದು ಆರೋಪಿಸಿದ್ದರು.
ಸೋಲಿನ ಭಯದಿಂದ ಬಿಜೆಪಿ ಗೂಂಡಾಗಳು ಸೂರತ್‌ನ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಅಪಹರಿಸಿದ್ದಾರೆ ಎಂದು ಅವರು ಹೇಳಿದರು.
ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಜರಿವಾಲಾ ಅವರನ್ನು “ಪೊಲೀಸ್ ಮತ್ತು ಬಿಜೆಪಿ ಗೂಂಡಾಗಳು” ಎಳೆದೊಯ್ದಿದ್ದಾರೆ ಮತ್ತು ಅವರ ನಾಮಪತ್ರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

https://twitter.com/raghav_chadha/status/1592778981509857283?ref_src=twsrc%5Etfw%7Ctwcamp%5Etweetembed%7Ctwterm%5E1592778981509857283%7Ctwgr%5E36613ddc4546651291576d08a62ca29d510fa215%7Ctwcon%5Es1_&ref_url=https%3A%2F%2Fzeenews.india.com%2Findia%2Fgujarat-assembly-polls-aap-candidate-kanchan-jariwala-withdraws-nomination-arvind-kejriwal-accuses-bjp-of-pressuring-him-2536124.html

ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೇಗೆ ಒಟ್ಟಾಗಿ ನಮ್ಮ ಸೂರತ್ ಪೂರ್ವ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು RO ಕಚೇರಿಗೆ ಎಳೆದೊಯ್ದಿದ್ದಾರೆ ಎಂಬುದನ್ನು ವೀಕ್ಷಿಸಿ, ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ‘ಮುಕ್ತ ಮತ್ತು ನ್ಯಾಯಯುತ ಚುನಾವಣೆ’ ಎಂಬ ಪದವು ತಮಾಷೆಯಾಗಿದೆ!” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಂಜೆ, ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ಸಿಸೋಡಿಯಾ ನೇತೃತ್ವದ ಎಎಪಿಯ ನಾಲ್ಕು ಸದಸ್ಯರ ನಿಯೋಗವು ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು ಹಾಗೂ ಚುನಾವಣಾ ಕಾವಲು ಸಮಿತಿಯು ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿಯನ್ನು (ಸಿಇಒ) ವಿಚಾರಣೆ ನಡೆಸಿ ಆರೋಪಗಳ ಬಗ್ಗೆ “ವಾರೆಂಟೆಡ್” ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಪ್ರಮುಖ ಸುದ್ದಿ :-   ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement