ಧಾರವಾಡ: ಕ್ಯಾಂಪಸ್ ಸಂದರ್ಶನ-ಬಿಕಾಂ, ಬಿಬಿಎ, ಎಂಕಾಂ, ಎಂಬಿಎ ಉತ್ತೀರ್ಣರು ಪಾಲ್ಗೊಳ್ಳಬಹುದು

ಧಾರವಾಡ: ಡಾ. ಡಿ ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಪ್ರಯುಕ್ತ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನವೆಂಬರ್‌ 28ರಂದು ಬೆಳಿಗ್ಗೆ 9:30 ಕ್ಕೆ ಶಕ್ತಿ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಸಿಯಲ್ ಮಾರ್ಕೆಟ್‌ ವತಿಯಿಂದ ಗ್ಲೋಬಲ್ ಬ್ಯಾಂಕ್‌ಗಳಿಗೆ ವಿವಿಧ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
2020, 2021, 2022ರಲ್ಲಿ ಬಿ.ಕಾಂ, ಬಿ.ಬಿ.ಎ, ಎಂ.ಕಾಂ, ಎಂ.ಬಿ.ಎ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಬಯೋಡೆಟಾ, ಅಂಕಪಟ್ಟಿ ನಕಲು ಪ್ರತಿ, ಆಧಾರ ಕಾರ್ಡ್‌ ನಕಲು ಪ್ರತಿ, ಪಾಸ್‌ಪೋರ್ಟ್‌ ಸೈಜ್ ಫೋಟೊದೊಂದಿಗೆ ಹಾಜರಾಗಬೇಕು. 9686199524ಕ್ಕೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು 0836-2462202ಕ್ಕೆ ಕರೆ ಮಾಡಿ ಪಡೆದುಕೊಳ್ಳಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement