ಕಾಲುವೆಗೆ ಈಜಲು ಹೋಗಿ ನೀರು ಪಾಲಾದ ಮೂವರು ವಿದ್ಯಾರ್ಥಿಗಳು

ಬಳ್ಳಾರಿ : ಕಾಲುವೆಗೆ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದ ವರದಿಯಾಗಿದೆ.
ಒಟ್ಟು ಆರು ವಿದ್ಯಾರ್ಥಿಗಳು ಈಜಲು ತೆರಳಿದ್ದರು ಎಂದು ಹೇಳಲಾಗಿದ್ದು, ಅವರಲ್ಲಿ ಮೂವರು ನೀರು ಪಾಲಾಗಿದ್ದಾರೆ. ಮೂವರು ಪಾರಾಗಿ ಬಂದಿದ್ದಾರೆ. ಮೃತರನ್ನು ಯಶವಂತ​​, ಅಂಜಿನಿ, ಗುರುರಾಜ ಎಂದು ಗುರುತಿಸಲಾಗಿದೆ.
ಹೊಸಪೇಟೆಯ ವಿಜಯನಗರ ಕಾಲೇಜ್​ನಲ್ಲಿ ಇಬ್ಬರು ಪಿಯುಸಿ ಓದುತ್ತಿದ್ದರೆ, ಒಬ್ಬ ಪದವಿ ವಿದ್ಯಾರ್ಥಿ ಎಂದು ಹೇಳಲಾಗಿದೆ. ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗ್ನಶಾಮಕದಳದ ಸಿಬ್ಬಂದಿ ನೀರು ಪಾಲಾದ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಇವರೆಲ್ಲ ಹೊಸಪೇಟೆಯ ಎಂಜಿ ನಗರ, ಗುಂಡಾ ಗ್ರಾಮ ಹಾಗೂ ಕೊಪ್ಪಳದ ಹೊಸ ನಿಂಗಾಪುರದ ಗ್ರಾಮದವರು ಎಂದು ಹೇಳಲಾಗಿದೆ.

 

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement