ಮಂಗಳೂರು : ತಂದೆ ಮತ್ತು ಮಗ ಮೀನು ಹಿಡಿಯಲೆಂದು ಹೊಳೆಗೆ ಹೋಗಿದ್ದ ವೇಳೆ ಒಂಟಿ ಸಲಗದ ದಾಳಿಯಿಂದ ತಂದೆ ಮೃತಪಟ್ಟಿದ್ದು, ಮಗ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಗುಂಡ್ಯ ಹೊಳೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿ ತಿಮ್ಮಪ್ಪ (45) ಎಂದು ಗುರುತಿಸಲಾಗಿದೆ. ಅವರ ಪುತ್ರ ಶರಣ (೧೮) ಎಂಬವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಪಡೆಯುತ್ತಿದ್ದಾರೆ.
ಮಗ ಶರಣ ಮೀನು ಹಿಡಿಯಲು ಹೊಳೆಗೆ ಹೋಗಿದ್ದ ವೇಳೆ, ಹೊಳೆಯ ಕಡೆಗೆ ಬಂದ ಒಂಟಿ ಸಲಗ ಆತನ ಮೇಲೆ ದಾಳಿ ಮಾಡಿದೆ.
ಈ ವೇಳೆ ಅಲ್ಲಿದ್ದ ತಂದೆ ಮಗನ ರಕ್ಷಣೆಗೆ ಓಡಿ ಬಂದ ತಿಮ್ಮಪ್ಪ ಅವರನ್ನು ಆನೆ ಕಾಲಿನಿಂದ ತುಳಿದಿದೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ತಿಮ್ಮಪ್ಪ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ನೆಲ್ಯಾಡಿ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ