ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಹಂತದ 189 ಅಭ್ಯರ್ಥಿಗಳ ಪಟ್ಟಿಬಿಡುಗಡೆಯಾಗಿದ್ದು, ಇವುಗಳಲ್ಲಿ 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿಸಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಮೊದಲನೇ ಪಟ್ಟಿಯಲ್ಲಿ ಬಿಡೆಗಡೆಯಾದ 189 ಅಭ್ಯರ್ಥಿಗಳ ಪೈಕಿ ಈ ಬಾರಿ ಕಾಣಿಸಿಕೊಂಡ ಹೊಸ ಅಭ್ಯರ್ಥಿಗಳು ಯಾರು? ಮತ್ತು ಟಿಕೆಟ್ ತಪ್ಪಿದ ನಾಯಕರ ಯಾರು ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಮೊದಲನೇ ಪಟ್ಟಿಯಲ್ಲಿ ಶಾಸಕರಾದ ಗೂಳಿಹಟ್ಟಿ ಶೇಖರ್ (ಹೊಸದುರ್ಗ ಕ್ಷೇತ್ರ), ಅನಿಲ್ ಬೆನಕೆ (ಬೆಳಗಾವಿ ಉತ್ತರ), ಮಹಾಂತೇಶ ಯಾದವಾಡ (ರಾಮದುರ್ಗ), ಸಂಜೀವ ಮಠಂದೂರು (ಪುತ್ತೂರು), ಲಾಲಜಿ ಮೆಂಡನ್ (ಕಾಪು), ರಘುಪತಿ ಭಟ್ (ಉಡುಪಿ), ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ), ರಾಮಣ್ಣ ಲಮಾಣಿ ( ಶಿರಹಟ್ಟಿ) ಅವರಿಗೆ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ.
ವಿವಿಧ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ
ಬೆಳಗಾವಿ ಉತ್ತರ – ರವಿ ಪಾಟೀಲ
ಸವದತ್ತಿ- ರತ್ನ ಮಹಾಮನಿ
ಚಿತ್ತಾಪುರ -ಮಣಿಕಂಠ
ಚಿಂಚೊಳ್ಳಿ- ಅವಿನಾಶ ಜಾಧವ್
ಶಿರಹಟ್ಟಿ- ಚಂದ್ರು ಲಮಾಣಿ
ರಾಮದುರ್ಗ- ಎಸ್ ಸರ್ ಚಿಕ್ಕರೇವಣ್ಣ
ಹಡಗಲಿ- ಕೃಷ್ಣ ನಾಯಕ್
ವಿಜಯನಗರ – ಸಿದ್ಧಾರ್ಥ ಸಿಂಗ್
ಸಿರಗುಪ್ಪ -ಸೋಮಲಿಂಗಪ್ಪ
ಹೊಸದುರ್ಗ- ಲಿಂಗಮೋರ್ತಿ
ಹರಿಹರ- ಬಿ.ಪಿ ಹರೀಶ್
ಶಿಕಾರಿಪುರ- ಬಿವೈ ವಿಜಯೇಂದ್ರ
ಕುಂದಾಪುರ- ಕಿರಣಕುಮಾರ ಕೊಡ್ಗಿ
ಉಡುಪಿ- ಯಶಪಾಲ ಸುವರ್ಣ
ಕುಣಿಗಲ್- ಕೃಷ್ಣ ಕುಮಾರ
ಶಿರಾ- ರಾಜೇಶ್ ಗೌಡ
ಮಧುಗಿರಿ- ಎಲ್ .ಸಿ ನಾಗರಾಜ
ಬಾಗೇಪಲ್ಲಿ -ಎಸ್ ಸಿ ಮುನಿರಾಜು
ಮುಳಬಾಗಿಲು- ಸೀಗೇಹಳ್ಳಿ ಸುಂದರ
ಬ್ಯಾಟರಾಯನಪುರ- ತಮ್ಮೇಶ್ ಗೌಡ
ಪುಲಿಕೇಶಿನಗರ- ಮುರಳಿ
ಸರ್ವಜ್ಞ ನಗರ- ಪದ್ಮನಾಭ ರಡ್ಡಿ
ಶಾಂತಿ ನಗರ- ಶಿವಕುಮಾರ
ಶಿವಾಜಿ ನಗರ- ಎನ್ ಚಂದ್ರ
ಚಾಮರಾಜಪೇಟೆ – ಭಾಸ್ಕರ್ ರಾವ್
ಜಯನಗರ -ಸಿ ಕೆ ರಾಮಮೂರ್ತಿ
ಆನೆಕಲ್- ಹುಲ್ಲಹಳ್ಳಿ ಶ್ರೀನಿವಾಸ
ದೊಡ್ಡಬಳ್ಳಾಪುರ- ಧೀರಜ್
ರಾಮನಗರ- ಗೌತಮ ಗೌಡ
ಮಾಗಡಿ- ಪ್ರಸಾದ್ ಗೌಡ
ಮಂಡ್ಯ- ಅಶೋಕ್ ಜೈರಾಮ್
ನಾಗಮಂಗಲ –-ಸುಧಾ ಶಿವರಾಂ (ಶಿವರಾಮೇಗೌಡ ಪತ್ನಿಗೆ ಟಿಕೆಟ್)
ಅರಕಲಗೂಡು- ಯೋಗಾ ರಮೇಶ
ಸಕಲೇಶ್ ಪುರ- ಸಿಮೆಂಟ್ ಮಂಜು
ಪುತ್ತೂರು- ಆಶಾ ತಿಮ್ಮಪ್ಪ
ಸುಳ್ಯ- ಭಾಗೀರಥಿ ಮುರುಳ್ಯ
ಪಿರಿಯಾಪಟ್ಟಣ- ವಿಜಯಶಂಕರ
ಚಾಮುಂಡೇಶ್ವರಿ- ಕವೀಶ್ ಗೌಡ
ಹನೂರು- ಪ್ರೀತಮ್ ನಾಗಪ್ಪ
ನಿಮ್ಮ ಕಾಮೆಂಟ್ ಬರೆಯಿರಿ