ತಿರುಪತಿ ದೇಗುಲದ ದಿವ್ಯ ದರ್ಶನ ಟೋಕನ್‌ ನೀಡುವಲ್ಲಿ ಪ್ರಮುಖ ಬದಲಾವಣೆ

ತಿರುಪತಿ: ದಿವ್ಯ ದರ್ಶನ ಟೋಕನ್‌ (Divya Darshan tokens)ಗಳನ್ನು ನೀಡುವುದಕ್ಕೆ ಸಂಬಂಧಪಟ್ಟಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೊಸ ಬದಲಾವಣೆ ಮಾಡಿದೆ.
ಹೊಸ ನಿಯಮದಿಂದ ಪಾದಯಾತ್ರೆ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಆಗಮಿಸುವವರ ಮೇಲೆ ಪರಿಣಾಮ ಬೀರಲಿದೆ. ಈ ಮೊದಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವವರಿಗೆ ಪಾದಯಾತ್ರೆ ಮಾರ್ಗದಲ್ಲಿ ಮತ್ತು ಗಾಳಿಗೋಪುರಂನಲ್ಲಿ ದಿವ್ಯ ದರ್ಶನ ಟೋಕನ್‌ಗಳನ್ನು ನೀಡಲಾಗುತ್ತಿತ್ತು. ಇಂದಿನಿಂದ ಅನ್ವಯವಾಗುವಂತೆ ಪಾದಯಾತ್ರೆ ಮಾರ್ಗದಲ್ಲಿ ಮತ್ತು ಗಾಲಿಗೋಪುರಂನಲ್ಲಿ ದಿವ್ಯ ದರ್ಶನ ಟೋಕನ್‌ಗಳನ್ನು ನೀಡಲಾಗುವುದಿಲ್ಲ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ತಿರುಮಲಕ್ಕೆ ಪಾದಯಾತ್ರೆ ಮೂಲಕ ತೆರಳುವಂತಹ ಭಕ್ತರು ದಿವ್ಯ ದರ್ಶನ ಟಿಕೆಟ್‌ ಅನ್ನು ಅಲಿಪಿರಿಯಲ್ಲಿರುವ ಭೂದೇವು ಕಾಂಪ್ಲೆಕ್ಸ್‌ನಿಂದ ಪಡೆಯಬೇಕು ಎಂದು ಟಿಟಿಡಿ ತಿಳಿಸಿದೆ.
ಭೂದೇವು ಕಾಂಪ್ಲೆಕ್ಸ್‌ನಲ್ಲಿ ಟಿಕೆಟ್‌ ಪಡೆದವರನ್ನು ಮಾತ್ರ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಬಿಡಲಾಗುವುದು. ಅಲಿಪಿರಿ ಕಾಂಪ್ಲೆಕ್ಸ್‌ನಲ್ಲಿ ದಿವ್ಯ ದರ್ಶನ ಟಿಕೆಟ್‌ ಪಡೆದವರಿಗೆ ಮಾತ್ರ ಗಾಳಿ ಗೋಪುರಂನಲ್ಲಿ ಸ್ಟಾಂಪ್‌ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಈಗ ಟಿಟಿಡಿಯು ಪ್ರತಿದಿನಕ್ಕೆ 8 ಸಾವಿರ ಟೋಕನ್‌ಗಳನ್ನು ಬಿಡುಗಡೆ ಮಾಡುತ್ತದೆ. ಮುಂದಿನ ದಿನದ ಟಿಕೆಟ್‌ ಪೂರ್ತಿ ಖಾಲಿಯಾದ ನಂತರ ಮುಂದಿನ ಟಿಕೆಟ್‌ ಬಿಡುಗಡೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement